ಶಾಂತಿಮುಗೇರು ಸುಬ್ರಹ್ಮಣ್ಯೇಶ್ವರ ದೇವಸ್ಥಾನ,ಕುದ್ಮಾರು ಬ್ರಹ್ಮಕಲಶೋತ್ಸವ | ಧಾರ್ಮಿಕ ದತ್ತಿ ಸಚಿವ ಕೋಟಾ ಅವರಿಗೆ ಮಠಂದೂರು ಸಮ್ಮುಖದಲ್ಲಿ ಆಹ್ವಾನ
ಬೆಂಗಳೂರು, ಮಾ.17 : ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರ ಸಮ್ಮುಖದಲ್ಲಿ ಇವತ್ತು ಮಾರ್ಚ್ 17 ರಂದು ಶ್ರೀ ಶಾಂತಿಮುಗೇರು ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕುದ್ಮಾರು ಇದರ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ದಕ್ಷಿಣಕನ್ನಡದ ಧಾರ್ಮಿಕ ದತ್ತಿ ಮತ್ತು ಉಸ್ತುವಾರಿ ಸಚಿವರಿಗೆ ಬ್ರಹ್ಮಕಲಶೋತ್ಸವದ ಕರಪತ್ರವನ್ನು ನೀಡುವ ಮೂಲಕ ಆಹ್ವಾನಿಸಲಾಯಿತು.
![](https://hosakannada.com/wp-content/uploads/2024/07/First.jpeg)
ಕುಮಾರಧಾರ ತಟದಲ್ಲಿರುವ ಶ್ರೀ ಕ್ಷೇತ್ರಕ್ಕೆ ಸಾವಿರ ವರ್ಷದ ಇತಿಹಾಸವಿದೆ. ಈಗ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮಕಲಶೋತ್ಸವ ಸಂಬಂಧಿಸಿದ ಅಗತ್ಯವಾದ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲು ಆರ್ಥಿಕ ಸಹಾಯ ಬೇಕಿದ್ದು, ಅದನ್ನು ಸರಕಾರದ ಕಡೆಯಿಂದ ಪೂರೈಸಿ ಕೊಡಬೇಕೆಂದು ಮನವಿ ಮಾಡಲಾಯಿತು.
![](https://hosakannada.com/wp-content/uploads/2024/07/Middle.jpeg)
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಚಂದ್ರಶೇಖರ್ ಅವರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಭರತ್ ನಡುಮನೆ, ಎವಿಜಿ ಅಸೋಸಿಯೇಟ್ಸ್ ನ ಮಾಲಕರಾದ ಎವಿ ನಾರಾಯಣ ಗೌಡ, ಬ್ರಹ್ಮಕಲಶೋತ್ಸವದ ಕಾರ್ಯಕಾರಿ ಸಮಿತಿಯ ಸದಸ್ಯ ನಾಗೇಶ್ ಕೆಡೆಂಜಿ ಅವರು ಹಾಜರಿದ್ದರು.