Breaking : ಕಡಬ | ಕೊಯಿಲ : ಸುದೆಂಗಳ ಎಂಬಲ್ಲಿ ಅರ್ಫಾದ್ ಕುಮಾರಧಾರ ನದಿ ಪಾಲು

Share the Article

ಕಡಬ ತಾಲೂಕು ಕೊಯಿಲ ಗ್ರಾಮದ ಸುದೆಂಗಳ ಎಂಬಲ್ಲಿ ಕುಮಾರಧಾರ ನದಿಗೆ ಸ್ನಾನಕ್ಕಿಳಿದ ವ್ಯಕ್ತಿ ಕಣ್ಮರೆಯಾಗಿದ್ದಾನೆ.

ಕೊಯಿಲ ಗ್ರಾಮದ ಜನತಾ ಕಾಲೋನಿ ನಿವಾಸಿ ಯಾಗಿರುವ ಅರ್ಫಾದ್ (22) ಕಣ್ಮರೆಯಾದ ಹುಡುಗ.

ಆತ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಕುಮಾರಧಾರಾ ನದಿಗೆ ಸ್ನಾನಕ್ಜೆ ತೆರಳಿದ್ದ. ನೀರಿನಲ್ಲಿ ಸ್ನಾನ ಮಾಡುತ್ತಾ ಮುಂದಕ್ಕೆ ತೆರಳಿದಾಗ ದಿಡೀರ್ ನೀರಿನಲ್ಲಿ ಕಣ್ಮರೆಯಾಗಿದ್ದಾನೆ.

ಅರ್ಫಾದ್ ನು ಇಸುಬು ಅವರ ಪುತ್ರ. ನದಿಯ ಬಳಿ ಗ್ರಾಮಸ್ಥರು ಮತ್ತು ಪೊಲೀಸರು ಈಗಾಗಲೇ ಬಂದಿದ್ದು ಶೋಧಕಾರ್ಯ ನಡೆದಿತ್ತು. ಸಂಜೆಯ ಹೊತ್ತಿಗೆ ನದಿಯಲ್ಲಿ ಮುಳುಗಿದ ಹುಡುಗನ ಶವ ಪತ್ತೆಯಾಗಿದೆ.

Leave A Reply

Your email address will not be published.