ಮಾಯಾ ಮಹೇಶ್ವರ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಆರಂಭ : ಮಾ 6 ರಿಂದ ಮಾ 10 ರವರೆಗೆ : ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳಾಲು : ಬೆಳಾಲು ಗ್ರಾಮದ ಮಾಯಾ ಮಹೇಶ್ವರ ದೇವಸ್ಥಾನ ಮಾಯ ಇದರ ವಾರ್ಷಿಕ ಜಾತ್ರೆಯು ಮಾ.6 ಆರಂಭವಾಗಲಿದ್ದು ಮಾ 10 ರವರೆಗೆ ನಡೆಯಲಿದೆ.

ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚಿಗೆ ಊರ ಹಿರಿಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್ ಪದ್ಮ ಗೌಡ, ವಿಜಯ್ ತಂತ್ರಿ, ಪಾರ್ಲ ಶಿವಕುಮಾರ್ ಬಾರಿತ್ತಾಯ, ಅರಿಕೋಡಿ ಕ್ಷೇತ್ರದ ಮೊಕ್ತೇಸರರಾದ ಶ್ರೀಯುತ ದೊಂಬಯ್ಯ ಗೌಡ, ಆರಿಕೊಡಿ ಧರ್ಮದರ್ಶಿಗಳಾದ ಹರೀಶ್ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಗೌಡ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ದೇವಸ್ಥಾನದ ಅರ್ಚಕ ಕೇಶವ ರಾಮದೂಜಿ, ಮಾಯಾ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ವಸಂತ ಎಂಕೆ, ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ರಾಜಪ್ಪ ಗೌಡ, ದಿನೇಶ್ ಎಂ, ಶೇಖರ್ ಕೊಲ್ಲಿಮಾರು, ಪೆರಣ ಗೌಡ, ರಮೇಶ್ ಪೂಜಾರಿ ಗುಂಡ್ಯ, ಸುಕನ್ಯಾ ಸುವರ್ಣ ಮತ್ತಿತರರು ಹಾಜರಿದ್ದರು.

Leave A Reply

Your email address will not be published.