ಫೆ.7ರಿಂದ ಫೆ.8 : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ

ಫೆ.7ರಿಂದ ಫೆ.8 : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ

ಸವಣೂರು : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಫೆ.7ರಿಂದ ಫೆ.8ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಫೆ.6ರಂದು ಬೆಳಿಗ್ಗೆ ಊರ ಭಕ್ತಾಧಿಗಳಿಂದ ಸಮರ್ಪಿಸಿದ ಹೊರೆಕಾಣಿಕೆಗೆ ಸವಣೂರು ಪುದುಬೆಟ್ಟು ಜಿನಮಂದಿರದ ಬಳಿಯಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು ಚಾಲನೆ ನೀಡಿದರು.

ಚಾಲನೆ ಹಸಿರು ವಾಣಿ

ಈ ಸಂದರ್ಭ ಉತ್ಸವ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು,ಕಾರ್ಯದರ್ಶಿ ದಯಾನಂದ ಮಾಲೆತ್ತಾರು,ಸೇವಾ ಸಮಿತಿ ಅಧ್ಯಕ್ಷ ಉಮಾಪ್ರಸಾದ್ ರೈ ನಡುಬಲು ,ಸವಣೂರುಗುತ್ತು ರತ್ನಾಕರ ಶೆಟ್ಟಿ,ರವೀಂದ್ರನಾಥ ರೈ ನೋಲ್ಮೆ,ಎನ್ ಸುಂದರ ರೈ ಸವಣೂರು,ಗಿರಿಶಂಕರ ಸುಲಾಯ,ಬೆಳಿಯಪ್ಪ ಗೌಡ ಚೌಕಿಮಠ,ರಾಘವ ಗೌಡ ಸವಣೂರು,ಪ್ರಜ್ವಲ ಕೆ.ಆರ್ ಮೊದಲಾದವರಿದ್ದರು

ದೇವಸ್ಥಾನಕ್ಕೆ ಬಂದ ಹಸಿರುವಾಣಿ

ಫೆ.7ರಂದು ಬೆಳಿಗ್ಗೆ ತಂತ್ರಿಗಳ ಆಗಮನ,ಸಾಮೂಹಿಕ ಪ್ರಾರ್ಥನೆ,ಪುಣ್ಯಾಹ,ಮಧ್ಯಾಹ್ನ ಕಲಶಾಭಿಷೇಕ,ಮಹಾಪೂಜೆ,ಪರಿವಾರ ದೇವರುಗಳ ಪ್ರತಿಷ್ಠಾ ದಿನದ ಪೂಜೆ,ಮಹಾಪೂಜೆ,ಪ್ರಸಾದ ವಿತರಣೆ,ಪಲ್ಲಪೂಜೆ ನಡೆಯಲಿದೆ.ಗೋಪಾಲಕೃಷ್ಣ ಬಡೆಕಿಲ್ಲಾಯ ಅವರ ಮನೆಯವರ ಸೇವಾರ್ಥವಾಗಿ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ದೀಪಾರಾಧನೆ,ತಾಯಂಬಕ ಸೇವೆ,ಮಹಾಪೂಜೆ,ಶ್ರೀ ದೇವರ ಬಲಿಹೊರಟು ಉತ್ಸವ,ಶ್ರೀ ಭೂತಬಲಿ,ವಸಂತ ಕಟ್ಟೆಪೂಜೆ,ಸುಡುಮದ್ದು ಪ್ರದರ್ಶನ ನಡೆಯಲಿದೆ. ಫೆ.8ರಂದು ಬೆಳಿಗ್ಗೆ ದರ್ಶನ ಬಲಿ,ಬಟ್ಟಲು ಕಾಣಿಕೆ,ರಾಜಾಂಗಣ ಪ್ರಸಾದ,ವೈಧಿಕ ಮಂತ್ರಾಕ್ಷತೆ ನಡೆಯಲಿದೆ.ಸವಣೂರು ಕೆ.ಸೀತಾರಾಮ ರೈ ಅವರ ಪುತ್ರ ಡಾ.ರಾಜೇಶ್ ರೈ ಸವಣೂರು ಅವರ ಸೇವಾರ್ಥ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ರಂಗಪೂಜೆ,ಉಳ್ಳಾಲ್ತಿ ದೈವಕ್ಕೆ ನೇಮೋತ್ಸವ,ಸವಣೂರು ಗುತ್ತು ಕುಟುಂಬಸ್ಥರ ಸೇವಾರ್ಥ ಅನ್ನಸಂತರ್ಪಣೆ ನಡೆಯಲಿದೆ.

Leave A Reply

Your email address will not be published.