ವಿಶ್ವ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ರಂಜಿತ್​ ಬಚ್ಚನ್​ ಅವರನ್ನು ಗುಂಡು ಹಾರಿಸಿ ಹತ್ಯೆ

ಲಕ್ನೋ : ಉತ್ತರ ಪ್ರದೇಶ ರಾಜಧಾನಿ ಲಖನೌ ನ ಹಜರತ್​ಗಂಜ್​ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆದುಷ್ಕರ್ಮಿಗಳು ಗುಂಡು ಹಾರಿಸಿ ವಿಶ್ವ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ರಂಜಿತ್​ ಬಚ್ಚನ್​ ಅವರನ್ನು ಹತ್ಯೆಮಾಡಿದ್ದಾರೆ.

ಇಂದು ಬೆಳಗ್ಗೆ ವಾಯುವಿಹಾರಕ್ಕೆಂದು ತೆರಳಿದ್ದಾಗ ಬೈಕ್​ ಮೇಲೆ ಬಂದ ದುಷ್ಕರ್ಮಿಗಳು ತಂಡ ರಂಜಿತ್​ ಬಚ್ಚನ್​ ಮೇಲೆ ಫೈರಿಂಗ್​ ಮಾಡಿದೆ. ತಲೆಗೆ ಗುರಿಯಾಗಿರಿಸಿಕೊಂಡು ಅನೇಕ ಬಾರಿ ಶೂಟ್​ ಮಾಡಿದ್ದು, ಪರಿಣಾಮ ರಂಜಿತ್ ಬಚ್ಚನ್​ ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ​ಗುಂಡಿನ ದಾಳಿಯಲ್ಲಿ ಬಚ್ಚನ್ ಅವರ ಸಹೋದರನಿಗೂ ಗುಂಡು ತಾಗಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಖನೌದ ಹಜರತ್​ಗಂಜ್​ನಲ್ಲಿರುವ ಸಿಡಿಆರ್​ಐ ಕಟ್ಟಡ ಸಮೀಪದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಘಟನೆಯ ಸುದ್ದಿ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಂಡಾಮಂಡಲರಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಲಖನೌ ಕೇಂದ್ರ ಡಿಸಿಪಿ ದಿನೇಶ್​ ಸಿಂಗ್​ ಅವರು ಮಾತನಾಡಿ ಪೊಲೀಸ್​ ತಂಡವೊಂದನ್ನು ರಚನೆ ಮಾಡಲಾಗಿದ್ದು, ಅಪರಾಧಿಗಳ ಶೀಘ್ರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದಿದ್ದಾರೆ.

2 Comments
  1. escape room says

    You actually make it seem so easy together with your presentation but I find this
    matter to be actually something which I think I might by no
    means understand. It sort of feels too complex and extremely extensive for me.
    I am taking a look ahead on your subsequent put up, I’ll attempt to get the hold of it!
    Escape room

  2. Newton K says

    I like this website it’s a master piece! Glad I noticed
    this on google..

Leave A Reply

Your email address will not be published.