ಮಾಸ್ಟರ್ ಆನಂದ್ ಪುತ್ರಿ, ಪುಟಾಣಿ ವಂಶಿಕಾ ಹೆಸರಿನಲ್ಲಿ ವಂಚನೆ; ಆರೋಪಿ ಆಶಾ ನರಸಪ್ಪಳಿಗೆ 14 ದಿನ ಕಸ್ಟಡಿ !

Child actress Vamshika :ನಟ ನಿರೂಪಕ ಮಾಸ್ಟರ್ ಆನಂದ್ ಪುತ್ರಿ, ಬಾಲನಟಿ ವಂಶಿಕಾ(Child actress Vamshika) ಹೆಸರಿನಲ್ಲಿ ಜನರನ್ನು ವಂಚಿಸಿರುವ ನಿಶಾ ನರಸಪ್ಪಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಬೆಂಗಳೂರಿನ 39 ನೇ ಎಸಿಎಮ್ಎಮ್ ಕೋರ್ಟ್ ಆದೇಶ ಹೊರಡಿಸಿದೆ.

 

ವಂಚನೆ ಬಗ್ಗೆ ವಂಶಿಕಾ ತಾಯಿ ಯಶಸ್ವಿನಿಯವರು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿಶಾ ನರಸಪ್ಪಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಇದೀಗ 39 ನೇ ಎಸಿಎಮ್ಎಮ್ ಕೋರ್ಟ್ ಮುಂದೆ ನಿಶಾಳನ್ನು ಹಾಜರುಪಡಿಸಿ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮಾಸ್ಟರ್ ಆನಂದ ಪತ್ನಿ ಯಶಸ್ವಿನಿಗೆ ಅವರಿಗೆ ಇನ್‌ಸ್ಟಾಗ್ರಾಂ ಮೂಲಕ ಸದ್ಯದ ಆರೋಪಿ ನಿಶಾ ಎಂಬಾಕೆಯ ಪರಿಚಯವಾಗಿತ್ತು. ಕಾರ್ಯಕ್ರಮವೊಂದಕ್ಕೆ ತಾಯಿ–ಮಗಳನ್ನು ನಿಶಾ ಆಹ್ವಾನಿಸಿದ್ದರು. ಇದರಿಂದ ಅವರಿಬ್ಬರ ಮದ್ಯೆ ಒಂದಷ್ಟು ಬಾಂಧವ್ಯ ಬೆಳೆದಿತ್ತು ಅವರಿಬ್ಬರೂ ಹತ್ತಿರವಾಗಿದ್ದರು.

 

ಎನ್‌ಎನ್‌ ಪ್ರೊಡಕ್ಷನ್ಸ್‌ ಕಂಪನಿ ಮೂಲಕ ಕಿಡ್ಸ್‌ ಮಾಡೆಲಿಂಗ್‌, ಬೇಬಿ ಕಾಂಟೆಸ್ಟ್‌, ರಿಯಾಲಿಟಿ ಶೋ, ಧಾರಾವಾಹಿಗಳ ಆಡಿಷನ್‌ ಸೇರಿ ಹಲವು ಸಿನಿಮಾ ಚಾನ್ಸ್‌ ನೀಡುವುದಾಗಿ ನಿಶಾ ನರಸಪ್ಪ ಎಂಬುವ ಮಹಿಳೆ, ವಂಶಿಕಾ ಆನಂದ್‌ ಹೆಸರನ್ನು ಮುಂದಿಟ್ಟುಕೊಂಡು, ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡಿದ್ದಾರೆ. ಈ ವಿಚಾರ ವಂಶಿಕಾ ತಾಯಿ ಯಶಸ್ವಿನಿ ಗಮನಕ್ಕೂ ಬಂದಿದೆ. ಕೂಡಲೇ ವಂಚನೆಗೊಳಗಾದ ಪೋಷಕರ ಜತೆ ತೆರಳಿ ಸದಾಶಿವನಗರ ಠಾಣೆಯಲ್ಲಿ ದೂರು ನೀಡಿದ್ದರು.

 

ಪುಟಾಣಿ ಮಕ್ಕಳ 40 ಲಕ್ಷ ಹಣ ವಂಚನೆ:

ಬೇಬಿ ಕಾಂಟೆಸ್ಟ್‌ ನಡೆಸ್ತೇವೆ, ರಿಯಾಲಿಟಿ ಶೋ, ಧಾರಾವಾಹಿಗಳ ಆಡಿಷನ್‌ ಈ ಎಲ್ಲವನ್ನೂ ಮಾಡುತ್ತೇವೆ ಎಂದು ಜನರಿಂದ ಹಣ ಕಲೆಕ್ಟ್ ಮಾಡಲು ನಿಶಾ ನರಸಪ್ಪ ತೊಡಗಿದ್ದಳು. ಕಳೆದ ಕೆಲವು ತಿಂಗಳ ಹಿಂದೆ ನಿಶಾಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಯಶಸ್ವಿನಿ ಆನಂದ್‌ ಮತ್ತು ತಂಡ ಕಳೆದ ಆರು ತಿಂಗಳಿಂದ ನಿಲ್ಲಿಸಿದೆ. ಹೀಗಿರುವಾಗ ವಂಶಿಕಾ ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ನಿತ್ಯ ಹಣ ಪಡೆದವರು ಮೆಸೇಜ್ ಮಾಡುತ್ತಿದ್ದರು. ಹೀಗೆ ಸಂದೇಶ ಮಾಡಿದವರನ್ನೆಲ್ಲ ನಿಶಾ ನರಸಪ್ಪ ಬ್ಲಾಕ್‌ ಮಾಡುತ್ತಲೇ ಬಂದಿದ್ದಾರೆ. ಆಗ ಪೋಷಕರಿಂದ ಯಶಸ್ವಿನಿಗೆ ಈ ವಿಚಾರ ಗೊತ್ತಾಗಿದೆ. ಅದಾದ ಮೇಲೆ ಎಷ್ಟು ಮೊತ್ತ ಎಂದು ವಿಚಾರಿಸಿದಾಗ ಬರೋಬ್ಬರಿ 40 ಲಕ್ಷ ಎಂಬುದು ಗೊತ್ತಾಗಿದೆ.

 

ಬಾಲ ಪ್ರತಿಭೆ ವಂಶಿಕಾ ಹೆಸರು ಹಾಗೂ ಫೋಟೊಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ನಿಶಾ, ಮಕ್ಕಳಿಗೆ ಟಿ.ವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕೊಡಿಸುತ್ತೇನೆ ಎಂದು ಜಾಹೀರಾತು ನೀಡುತ್ತಿದ್ದಳು. ಮಕ್ಕಳ ಫೋಟೊಶೂಟ್ ಹೆಸರಿನಲ್ಲಿ ಪೋಷಕರಿಂದ ಹಣ ಪಡೆಯುತ್ತಿದ್ದರು. ನಂತರ, ಯಾವುದೇ ಅವಕಾಶ ಕೊಡಿಸದೇ ಜನರನ್ನು ವಂಚಿಸುತ್ತಿದ್ದರು. ಇದುವರೆಗೂ ಒಟ್ಟು 17 ಜನರಿಗೆ ನಿಶಾ ವಂಚಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ. ದೊಡ್ಡ ಪ್ರಮಾಣದ ದೂರುಗಳು ಕಂಡುಬಂದ ಹಿನ್ನೆಲೆಯಲ್ಲಿ ಕೂಡಲೇ ಮಾಸ್ಟರ್ ಆನಂದ ಪತ್ನಿ ಯಶಸ್ವಿನಿ ಅವರು ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಕ್ರಮದ ಪೊಲೀಸರು ಆರೋಪಿ ನಿಶಾಳನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದರು ಇದೀಗ ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ :ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ !5 ವರ್ಷಗಳ ಕೆಲಸದ ವೀಸಾ ಘೋಷಿಸಿದ ಪ್ರಧಾನಿ !

Leave A Reply

Your email address will not be published.