ಕಡಬ:ತಾಲೂಕು ಮಟ್ಟದ ಗಣರಾಜ್ಯೋತ್ಸವ!! ತಹಶೀಲ್ದಾರ್ ಅನಂತ ಶಂಕರ್ ರಿಂದ ಧ್ವಜಾರೋಹಣ-ಠಾಣಾ ಎಸ್ಐ ರುಕ್ಮ ನಾಯ್ಕ್ ನೇತೃತ್ವದ ಸಿಬ್ಬಂದಿಗಳಿಂದ ಕವಾಯತು
ಕಡಬ : 73 ನೇ ವರ್ಷದ ಗಣರಾಜ್ಯೋತ್ಸವವನ್ನು ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯ ವತಿಯಿಂದ ಕಡಬ ತಾಲೂಕು ಆವರಣದಲ್ಲಿ ಆಚರಿಸಲಾಯಿತು. ‘ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ನಮ್ಮ ಭಾರತದ ಸಂವಿಧಾನವು ಪರಮಶ್ರೇಷ್ಠವಾಗಿ ಗುರುತಿಸಿಕೊಂಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಿರಿಯರು ಹಾಕಿದ ನೀತಿ ನಿರೂಪಣೆಯನ್ನು ಮನನ ಮಾಡಿಕೊಳ್ಳುವ ದಿನವಾಗಿ ಈ ಸಂಭ್ರಮವನ್ನು ಆಚರಿಸಬೇಕು. ಸಕಾರಾತ್ಮಕ ಉತ್ತರಗಳನ್ನು ನಮ್ಮೆಲ್ಲ ಪ್ರಶ್ನೆಗಳಿಗೆ ಕಂಡುಕೊಳ್ಳೋಣ ಎಂದು ಆಶಯ ವ್ಯಕ್ತಪಡಿಸೋಣ ಎಂದು ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದ ಕಡಬ ತಹಶೀಲ್ದಾರ್ …