Home » ವಿಜಯ್‌ಗೆ ಕಾಡಿದೆ ಹೊಸ ತಲೆನೋವು: ಬದ್ಧ ವೈರತ್ವ ಮರೆತು ಒಟ್ಟಾಗಿ ಸರಕಾರ ರಚನೆಗೆ ಸಜ್ಜಾಗಲು ರೆಡಿಯಾಗ್ತಾರಾ ಡಿಎಂಕೆ-ಎಐಎಡಿಎಂಕೆ?

ವಿಜಯ್‌ಗೆ ಕಾಡಿದೆ ಹೊಸ ತಲೆನೋವು: ಬದ್ಧ ವೈರತ್ವ ಮರೆತು ಒಟ್ಟಾಗಿ ಸರಕಾರ ರಚನೆಗೆ ಸಜ್ಜಾಗಲು ರೆಡಿಯಾಗ್ತಾರಾ ಡಿಎಂಕೆ-ಎಐಎಡಿಎಂಕೆ?

0 comments

ಚೆನ್ನೈ: ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಟಿವಿಕೆಗೆ ಕಾಂಗ್ರೆಸ್‌ ಬೆಂಬಲ ನೀಡಿದ್ದರೂ ಸರಕಾರ ರಚನೆಗೆ ಇನ್ನೂ 5 ಸ್ಥಾನಗಳ ಅಗತ್ಯವಿದೆ. ಯಾವ ಪಕ್ಷವೂ ಟಿವಿಕೆಗೆ ಬೆಂಬಲ ನೀಡುವುದಾಗಿ ಘೋಷಿಸದ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದು ನಿಗದಿಯಾಗಿದ್ದ ವಿಜಯ್‌ ಅವರ ಪ್ರಮಾಣವಚನ ಸಮಾರಂಭವನ್ನು ಮುಂದೂಡಿದ್ದರು. ಬಹುಮತ ಸಾಬೀತುಪಡಿಸುವವರೆಗೂ ಸರಕಾರ ರಚನೆಗೆ ಅನುಮತಿ ನೀಡುವುದಿಲ್ಲ ಎಂದು ವಿಜಯ್‌ ಅವರನ್ನು ವಾಪಸ್‌ ಕಳುಹಿಸಿದ್ದರು.

ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಒಟ್ಟಾಗಿ ಸರಕಾರ ನಡೆಸಲು ರಹಸ್ಯ ಮಾತುಕತಡೆ ನಡೆಸುತ್ತಿದೆ ಎನ್ನಲಾಗಿದೆ. ಎರಡೂ ಪಕ್ಷಗಳ ಪ್ರಮುಖ ನಾಯಕರು ಈ ಮಾತುಕತೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತನ್ನ ದೀರ್ಘಕಾಲದ ಪ್ರತಿಸ್ಪರ್ಧಿ ಎಐಎಡಿಎಂಕೆ ಜೊತೆ ರಹಸ್ಯವಾಗಿ ಮಾತುಕತೆಗಳನ್ನು ಪ್ರಾರಂಭ ಮಾಡಿದೆ ಎನ್ನಲಾಗುತ್ತಿದೆ.

ಎಪ್ರಿಲ್‌ 23 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 59 ಸ್ಥಾನಗಳನ್ನು ಪಡೆದರೆ, ಎಐಎಡಿಎಂಕೆ 47 ಸ್ಥಾನಗಳನ್ನು ಗಳಿಸಿದೆ. ಒಟ್ಟು ಶಾಸಕರ ಸಂಖ್ಯೆ 106 ಆಗುತ್ತಿದೆ. ಬಹುಮತ ಪಡೆಯಲು 118 ಶಾಸಕರ ಅಗತ್ಯವಿದೆ.

You may also like