Putturu: ಪಿಯುಸಿ ನಂತರ ಮುಂದೇನು? ಯಾವ ಕೋರ್ಸ್ ಮಾಡಿದರೆ ಉದ್ಯೋಗ ಸಿಗಬಹುದು? ಯಾವುದನ್ನು ಆಯ್ಕೆ ಮಾಡಲಿ? ಎನ್ನುವ ಗೊಂದಲದಲ್ಲಿರುವ ವಿದ್ಯಾರ್ಥಿಗಳು, ಪೋಷಕರಿಗೆ ಅತ್ಯಂತ ಖುಷಿಕೊಡುವ ಸುದ್ದಿ ಇದು

ಉದ್ಯೋಗ ಕೌಶಲ್ಯತೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ದಾರಿ ದೀಪವಾಗಿರುವ ಕರಾವಳಿ ಭಾಗದ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ತನ್ನ ಮಾತೃ ಸಂಸ್ಥೆಯಾದ ವಿದ್ಯಾಮಾತಾ ಪೌಂಡೇಶನ್ ಟ್ರಸ್ಟ್ ನ ಮೂಲಕ 2026-27ನೇ ಸಾಲಿನ ಯೋಜನೆಯಂತೆ “ಉಚಿತ ಶಿಕ್ಷಣ – ಖಚಿತ ಉದ್ಯೋಗ” ಎಂಬ ವಿಶಿಷ್ಟ ಹಾಗೂ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಯೋಜನೆಯನ್ನು ಪರಿಚಯಿಸಿದೆ.
ಪಿಯುಸಿ ನಂತರ ಪದವಿ ಮಾಡಿದರೆ ಒಳ್ಳೆಯದು. ಆದರೆ ತಾನು ಯಾವ ಪದವಿಯನ್ನು ಆಯ್ಕೆ ಮಾಡಿಕೊಂಡರೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಬಹುದು ಎಂಬುದು ವಿದ್ಯಾರ್ಥಿಗಳ ಮತ್ತು ಪೋಷಕರ ದೊಡ್ಡ ಚಿಂತೆಯಾಗಿರುತ್ತದೆ. ಕೊನೆಗೆ ಯಾವುದೋ ಒಂದು ಪದವಿಯನ್ನು ಆಯ್ಕೆ ಮಾಡಿಕೊಂಡು,ಪದವಿ ನಂತರ ಇನ್ನೂ ಉತ್ತಮ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಸ್ತಾತಕೋತರ ಪದವಿಯನ್ನು ಕೂಡ ವಿದ್ಯಾರ್ಥಿಗಳು ಮಾಡುತ್ತಾರೆ, ಇಷ್ಟೆಲ್ಲ ಮಾಡಿದರೂ ಉತ್ತಮ ಅಂಕಗಳಿದ್ದರೂ ಉದ್ಯೋಗ ಮಾತ್ರ ಸಿಗುವುದಿಲ್ಲ, ಅಂದರೆ ಕೇವಲ ಅಂಕಗಳನ್ನು ಆಧಾರಿತವಾಗಿರುವ ಶಿಕ್ಷಣ ವ್ಯವಸ್ಥೆಗೆ ಮಾತ್ರ ನಾವು ಗಮನವನ್ನು ಹರಿಸಿದರೆ ಉದ್ಯೋಗ ಪಡೆಯಲು ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸತ್ಯ.
ಪ್ರತಿ ಹಂತದಲ್ಲೂ ಆಧುನೀಕರಣಗೊಳ್ಳುತ್ತಿರುವ ಉದ್ಯಮ ಜಗತ್ತಿನಲ್ಲಿ ನಾವು ಕೂಡ ಕಾರ್ಪೊರೇಟ್ ಜಗತ್ತಿಗೆ ತಯಾರಾಗುವುದು ಅತ್ಯಂತ ಮುಖ್ಯವಾಗಿರುತ್ತದೆ. ನಮ್ಮ ಕರಾವಳಿ ಭಾಗದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಇದ್ದರೂ ಉದ್ಯೋಗ ಕೌಶಲ್ಯತೆಯನ್ನು ನಿರ್ಲಕ್ಷಿಸಿ ವ್ಯಾಸಂಗದ ನಂತರ ಉದ್ಯೋಗಕ್ಕೆ ಅಲೆದಾಡುತ್ತಿರುವ ಪರಿಸ್ಥಿತಿ ತಂದೊಡ್ಡಿದೆ ಎನ್ನಬಹುದು. ಇನ್ನೊಂದು ಕಡೆ ಸರಕಾರಿ ನೇಮಕಾತಿಗಳಲ್ಲಿ ಲಕ್ಷಾಂತರ ಹುದ್ದೆಗಳ ಅವಕಾಶಗಳು ಪ್ರತಿ ವರ್ಷ ಬಂದರೂ ಕೂಡ ಉನ್ನತ ವ್ಯಾಸಂಗದ ಜೊತೆ ಸರಕಾರಿ ನೇಮಕಾತಿಗಳಿಗೆ ಪೂರ್ವ ತಯಾರಿ ಮಾಡದೆ ವ್ಯಾಸಂಗದ ನಂತರ ಒತ್ತಡದ ಮಧ್ಯೆ ಸರಕಾರಿ ನೇಮಕಾತಿಗಳಿಗಾಗಿ ಪೂರ್ವ ತಯಾರಿಗಾಗಿ ಸಮಯಾವಕಾಶ ಕೊಡಲು ಸಾಧ್ಯವಾಗದೆ ದುಡಿಯುವ ಅನಿವಾರ್ಯತೆಯಲ್ಲಿ, ಸಿಕ್ಕಿದ ಉದ್ಯೋಗಕ್ಕೆ ಸೇರಿಕೊಂಡು ತಮ್ಮ ಭವಿಷ್ಯವನ್ನು ಬಹುತೇಕ ವಿದ್ಯಾರ್ಥಿಗಳು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದ ವಿದ್ಯಾಮಾತಾ ಅಕಾಡೆಮಿಯು ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಸ್ನಾತಕೋತ್ತರ ಡಿಪ್ಲೋಮಾ ಇತ್ಯಾದಿ ಉನ್ನತ ವ್ಯಾಸಂಗದ ಜೊತೆಗೆ ಸರಕಾರಿ ನೇಮಕಾತಿಗಳಿಗೆ ಪೂರ್ವ ತಯಾರಿ, ಖಾಸಗಿ ಉದ್ಯೋಗಗಳ ಕೌಶಲ್ಯ ತರಬೇತಿ, ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್, ಮಿಲಿಟರಿ/ಪೊಲೀಸ್ ಇತ್ಯಾದಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪ್ರಯತ್ನಿಸುವವರಿಗೆ ನಿರಂತರ ದೈಹಿಕ ಸದೃಢತೆಯ ಮೈದಾನ ತರಬೇತಿ ಇವೆಲ್ಲವನ್ನು ಪ್ರಥಮ ವರ್ಷದ ಪದವಿ ಸ್ನಾತಕೋತ್ತರ ಪದವಿ ಜೊತೆಗೆ ನೀಡಿ
ವಿದ್ಯಾಮಾತಾ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿರುವ ಪ್ರತಿಷ್ಠಿತ ಕಂಪನಿಗಳಲ್ಲಿ ಖಾಸಗಿ ಉದ್ಯೋಗಗಳನ್ನು ಕೊಡಿಸಿ, ಉಳಿದ ವ್ಯಾಸಂಗದ ಅವಧಿಯಲ್ಲಿ ನಿರಂತರವಾಗಿ ಸರಕಾರಿ ನೇಮಕಾತಿಗಳಿಗೆ ತರಬೇತಿಯನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ದೂರ ಶಿಕ್ಷಣದ ಮೂಲಕ ಉನ್ನತ ವ್ಯಾಸಂಗ ಪಡೆಯಲು ಇಚ್ಛಿಸುವವರಿಗೆ ನಿರಂತರ ಉಚಿತ ಮಾರ್ಗದರ್ಶನವನ್ನು ವಿದ್ಯಾಮಾತಾವು ನೀಡಲಿದೆ. ವಿಶ್ವ ವಿದ್ಯಾನಿಲಯದ ಶುಲ್ಕ ಹೊರತುಪಡಿಸಿ ಉನ್ನತ ವ್ಯಾಸಂಗದ ಮಾರ್ಗದರ್ಶನಕ್ಕೆ ವಿದ್ಯಾಮಾತಾ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ.
ಈ ಮೂಲಕ ಉನ್ನತ ವ್ಯಾಸಂಗದ ಜೊತೆಗೆ ಸರಕಾರಿ ನೇಮಕಾತಿಗಳಿಗೆ ಪೂರ್ವ ತಯಾರಿ, ಖಾಸಗಿ ಉದ್ಯೋಗ ಕೌಶಲ್ಯ ತರಬೇತಿ, ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್ ಎಲ್ಲವನ್ನು ನೀಡಿ ಒಂದೇ ವರ್ಷದಲ್ಲಿ ಖಾಸಗಿ ಉದ್ಯೋಗವನ್ನು ಕೂಡ ಒದಗಿಸಿ ಕೊಟ್ಟು ಯಾರಿಗೂ ಹೊರೆಯಾಗದಂತೆ ಉನ್ನತ ವ್ಯಾಸಂಗವನ್ನು ಮುಗಿಸುವುದರ ಜೊತೆಗೆ ನಿರಂತರ ಸರಕಾರಿ ನೇಮಕಾತಿಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಭವಿಷ್ಯದಲ್ಲಿ ಸರಕಾರಿ ಉದ್ಯೋಗ ಪಡೆಯುವಂತೆ ಮಾಡುವ ಈ ಅದ್ಭುತ ಯೋಜನೆಯನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬಹುದು. ತರಬೇತಿಯಲ್ಲಿರುವ ಪ್ರತಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಮಾರ್ಗದರ್ಶನದ ಜೊತೆಗೆ ಉಚಿತ ಕಂಪ್ಯೂಟರ್, ಸ್ಪೋಕನ್ ಇಂಗ್ಲೀಷ್, ಮಿಲಿಟರಿ ಇತ್ಯಾದಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪ್ರಯತ್ನಿಸುವವರಿಗೆ ಉಚಿತ ತರಬೇತಿ ಕೂಡ ಲಭ್ಯವಿರುತ್ತದೆ. ಪುತ್ತೂರು APMC ರಸ್ತೆಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಕೇಂದ್ರ ಕಚೇರಿಗೆ ಪೋಷಕರ ಜೊತೆಯಲ್ಲಿ ವಿದ್ಯಾರ್ಥಿಗಳು ತೆರಳಿ ಉಚಿತ ಆಪ್ತ ಸಮಾಲೋಚನೆಯ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯ ಪಡೆಯಬಹುದಾಗಿದೆ. ಉಚಿತ ಆಪ್ತ ಸಮಾಲೋಚನೆಗಾಗಿ ಮೊಬೈಲ್ ನಂಬರ್ 9620468869 ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಲು ಈ ಮೂಲಕ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

