Home Karnataka State Politics Updates ರಾಹುಲ್‌ ಗಾಂಧಿ ʼಶ್ರೀ ರಾಮʼ – ಸಲ್ಮಾನ್‌ ಖುರ್ಷಿದ್‌

ರಾಹುಲ್‌ ಗಾಂಧಿ ʼಶ್ರೀ ರಾಮʼ – ಸಲ್ಮಾನ್‌ ಖುರ್ಷಿದ್‌

Hindu neighbor gifts plot of land

Hindu neighbour gifts land to Muslim journalist

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ರಾಮಾಯಣಕ್ಕೆ ಹೋಲಿಸಿದ್ದಾರೆ. ಹಾಗೂ ರಾಹುಲ್ ಗಾಂಧಿಯನ್ನು ಭಗವಾನ್ ಶ್ರೀರಾಮನಿಗೆ ಹೋಲಿಕೆ ಮಾಡಿದ್ದಾರೆ.

ರಾಹುಲ್ ಗಾಂಧಿ ಅತಿಮಾನುಷ ವ್ಯಕ್ತಿ, ಈ ಚಳಿಗಾಲದಲ್ಲಿ ನಾವು ಚಳಿಯನ್ನು ತಡೆಯಲಾರದೆ ಜಾಕೆಟ್ ಧರಿಸಿದರೆ, ಅವರು ಜಾಕೆಟ್ ಧರಿಸದೆ ಕೇವಲ ಟಿ-ಶರ್ಟ್‌ನಲ್ಲೇ ಭಾರತ್ ಜೋಡೋ ಯಾತ್ರೆಗಾಗಿ ನಡೆಯುತ್ತಿದ್ದಾರೆ. ಅವರು ಯೋಗಿಯಂತೆ ಯಾಕಂದ್ರೆ, ಯೋಗಿ ತನ್ನ ತಪಸ್ಸನ್ನು ಏಕಾಗ್ರತೆಯಿಂದ ಮಾಡುತ್ತಾರೆ ಹಾಗೇ ರಾಹುಲ್ ಗಾಂಧಿ ಕೂಡ ಎಂದು ಸಲ್ಮಾನ್ ಖುರ್ಷಿದ್ ಹೇಳಿದರು.

‌ಅಲ್ಲದೆ, ಈ ಯಾತ್ರೆಯನ್ನು ರಾಮಾಯಣಕ್ಕೆ ಹೋಲಿಸಿದ ಸಲ್ಮಾನ್, ರಾಮನ ಪಾದುಕೆಯನ್ನು ಭರತ ಹೇಗೆ ಹೊತ್ತಿದ್ದನೋ ಹಾಗೆಯೇ ನಾವು ಕೂಡ ಉತ್ತರ ಪ್ರದೇಶದಲ್ಲಿ ‘ಪಾದುಕೆ’ ಯನ್ನು ಹೊತ್ತಿದ್ದೇವೆ. ಈಗ ಆ ‘ಪಾದುಕೆ’ ಉತ್ತರ ಪ್ರದೇಶವನ್ನು ತಲುಪಿದೆ. ರಾಮ್ ಜಿ (ರಾಹುಲ್ ಗಾಂಧಿ) ಕೂಡ ಬರುತ್ತಾರೆ ಎಂದು ಹೇಳಿದರು.