ಕೋತಿಯೊಂದು ಹೆಜ್ಜೇನು ಗೂಡಿಗೆ ದಾಳಿ ಮಾಡಿದ್ದು, ಇದರಿಂದ ಓರ್ವ ಸಾವಿಗೀಡಾಗಿದ್ದು, ನಾಲ್ಕೈದು ಜನ ಅಸ್ವಸ್ಥರಾಗಿರುವ ಘಟನೆ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ.

ಕಾರು ಶೋರೂಮ ಮೇಲ್ವಿಚಾರಕಾಗಿದ್ದ ವಿಜಯ್ ಪ್ರಕಾಶ್ (65) ಈ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ಬರುವ ಸಂದರ್ಭದಲ್ಲಿ ಮಾರುತಿ ನಗರದ ಪಿಎನ್ ಟಿ ಕ್ವಾಟ್ರಸ್ ಬಳಿ ಮರದಲ್ಲಿದ್ದ ಹೆಜ್ಜೇನು ಹಲವರ ಜೊತೆ ಇವರ ಮೇಲೂ ದಾಳಿ ಮಾಡಿತ್ತು.
ಬೈಕ್ನಲ್ಲಿದ್ದ ಬರುತ್ತಿದ್ದ ವಿಜಯ ಪ್ರಕಾಶ್ ಅವರು ಕೋತಿ ಮಾಡಿದ ಕೀಟಲೆ ಕೆಲಸದಿಂದ, ಹೆಜ್ಜೇನು ದಾಳಿಯಿಂದ ತಪ್ಪಿಸಲು ಹರಸಾಹಸ ಪಟ್ಟಿದ್ದಾರೆ. ಶರ್ಟ್ ಬಿಚ್ಚಿ ಓಡಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೂ ಐವತ್ತಕ್ಕೂ ಹೆಚ್ಚು ಜೇನು ನೊಣಗಳು ಅವರ ಮುಖ ಸೇರಿ ದೇಹದ ಹಲವು ಭಾಗಗಳ ಮೇಲೆ ದಾಳಿ ಮಾಡಿದ್ದವು. ಇದರಿಂದ ತೀವ್ರ ಅಸ್ವಸ್ಥಗೊಂಡ ವಿಜಯ್ ಪ್ರಕಾಶ್ ಅವರು ಜೀವ ತೆತ್ತಿದ್ದಾರೆ.
