Home latest Maharashtra: ನಿಮ್ಮಪ್ಪ ಅಮ್ಮ ನನಗೆ ಓಟ್‌ ಹಾಕದಿದ್ದರೆ ಊಟ ಮಾಡಬೇಡಿ ಎಂದು ಶಿವ ಸೇನಾ ಶಾಸಕ

Maharashtra: ನಿಮ್ಮಪ್ಪ ಅಮ್ಮ ನನಗೆ ಓಟ್‌ ಹಾಕದಿದ್ದರೆ ಊಟ ಮಾಡಬೇಡಿ ಎಂದು ಶಿವ ಸೇನಾ ಶಾಸಕ

Hindu neighbor gifts plot of land

Hindu neighbour gifts land to Muslim journalist

Maharastra: 2024 ರ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಆರಂಭಿಕ ಪ್ರಚಾರದ ಸಮಯದಲ್ಲಿ ಕಲಮನೂರಿ ಕ್ಷೇತ್ರದ ಶಿವಸೇನೆ ಏಕನಾಥ್ ಶಿಂಧೆ ಬಣದ ಶಾಸಕ ಸಂತೋಷ್ ಬಂಗಾರ್ ಮತ್ತೊಮ್ಮೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಸ್ವತಃ ಶಾಲೆ ಬಿಟ್ಟ ಸಂತೋಷ್ ಬಂಗಾರ್ (43) ಅವರು ತಮ್ಮ ಕ್ಷೇತ್ರದ ಲಕ್ಷ ಗ್ರಾಮದ ಪ್ರಾಥಮಿಕ ಶಾಲೆಯ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 50 ವಿದ್ಯಾರ್ಥಿಗಳ ಸಭೆಯನ್ನು ಉದ್ದೇಶಿಸಿ,

ಮುಂದಿನ ಚುನಾವಣೆಯಲ್ಲಿ ನಿಮ್ಮ ಅಪ್ಪ, ಅಮ್ಮ ನನಗೆ ಮತ ಹಾಕದಿದ್ದರೆ ಎರಡು ದಿನ ಊಟ ಮಾಡಬೇಡಿ ಎಂದು ಹೇಳಿದ್ದಾರೆ. ಇದನ್ನು ಮಕ್ಕಳು ಪಾಲಕರಿಗೆ ಹೇಳಿದರು.

‘ನಾನೇಕೆ ಊಟ ಮಾಡುತ್ತಿಲ್ಲ’ ಎಂದು ಪಾಲಕರು ಕೇಳಿದಾಗ, ಹೇಳಿ, ‘ನೀವು ಸಂತೋಷ್ ಬಂಗಾರ್ ಅವರಿಗೆ ಮತ ಹಾಕಬೇಕು’ ಎಂದು ಬಂಗಾರು ಮಕ್ಕಳೊಂದಿಗೆ ಹೇಳಿದ್ದಾರೆ. ಈ ಕುರಿತ ವೀಡಿಯೋ ಇದೀಗ ವೈರಲ್‌ ಆಗಿದೆ. ಬಂಗಾರ್ ಅವರ ಈ ಮಾತುಗಳನ್ನು ಆಡಿದ ನಂತರ ತಕ್ಷಣವೇ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (MVA) ನಾಯಕರಿಂದ ವಿವಾದವನ್ನು ಹುಟ್ಟುಹಾಕಿದವು. ಚಿಕ್ಕ ಮಕ್ಕಳನ್ನು ಮತ ಪಡೆಯಲು ಶೋಷಣೆ ಮಾಡುತ್ತಿರುವ ಬಂಗಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.