ಪಕ್ಷ ತಾಯಿ ಇದ್ದ ಹಾಗೆ. ಆ ತಾಯಿಯ ಗೌರವವನ್ನು ಅಸ್ಥಿರಗೊಳಿಸಿದರೆ ಜನ ಅದನ್ನು ಕ್ಷಮಿಸಲ್ಲ, ಪಕ್ಷನೂ ಕ್ಷಮಿಸಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.


ಈ ಪಾಪದ ಕೆಲಸಕ್ಕೆ ಮನೆಯಲ್ಲೂ ನೆಮ್ಮದಿ ಸಿಗಲ್ಲ. ಮೈತ್ರಿಗೆ ಇದರಿಂದ ಯಾವುದೇ ಭಂಗ ಆಗಲ್ಲ. ಇದಕ್ಕಿಂತ ಹೇಯ ಕೆಲಸ ಮತ್ತೊಂದಿಲ್ಲ. ನಾಯಕತ್ವ ವಿಫಲ ಮತ್ತೊಂದು ಮಗದೊಂದನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆದರೆ ಶಾಸಕರ ಮಾಡಿರುವುದು ಹೇಸಿಗೆಯ ಕೆಲಸ. ಇಂಥ ಜನ ಜನಪ್ರತಿನಿಧಿ ಆಗುವ ಬದಲು ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಮನೆಯಲ್ಲಿ ಇರೋದು ಒಳ್ಳೆಯದು. ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಒಂದು ಶಾಸಕನ ಕರ್ತವ್ಯ, ನಿಷ್ಠೆ ಗಮನದಲ್ಲಿ ಇಟ್ಟುಕೊಳ್ಳದೇ ನೀವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಇಲ್ಲ ಎಂದು ತುಮಕೂರಿನಲ್ಲಿ ಅಡ್ಡಮತದಾನದ ಕುರಿತು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದರು.
