Home News ಬೆಳ್ತಂಗಡಿ: ಶಾಲಾ ಮಕ್ಕಳನ್ನು ಟಿಪ್ಪರ್‌, ಪಿಕಪ್‌ನಲ್ಲಿ ಕರೆದುಕೊಂಡು ಹೋದ ಘಟನೆ; ಪ್ರಭಾರ ಮುಖ್ಯೋಪಾಧ್ಯಾಯ ಅಮಾನತು

ಬೆಳ್ತಂಗಡಿ: ಶಾಲಾ ಮಕ್ಕಳನ್ನು ಟಿಪ್ಪರ್‌, ಪಿಕಪ್‌ನಲ್ಲಿ ಕರೆದುಕೊಂಡು ಹೋದ ಘಟನೆ; ಪ್ರಭಾರ ಮುಖ್ಯೋಪಾಧ್ಯಾಯ ಅಮಾನತು

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಕಾನೂನು ಬಾಹಿರವಾಗಿ ಸರಕು ಸಾಗಣೆ ಮಾಡುವ ವಾಹನದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋದ ಘಟನೆಗೆ ಸಂಬಂಧ ಪಟ್ಟಂತೆ ಬಳೆಂಜ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್‌ ಎನ್ನುವವರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಸರಕಾರಿ ಶಾಲೆಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್‌ ನೇತೃತ್ವದಲ್ಲಿ ಪೆ.9 ರಂದು ಪಿಕಪ್‌ ಮತ್ತು ಟಿಪ್ಪರ್‌ ವಾಹನದಲ್ಲಿ ಮೂರು ಸಾವಿರ ಬಾಡಿಗೆ ನೀಡಿ ಅಧ್ಯಯನದ ಹೆಸರಿನಲ್ಲಿ ಸ್ಥಳೀಯು ನಾಲ್ಕೂರು ಅನಿಲ್‌ ಫಾರ್ಮ್‌ಗೆ ಕರೆದುಕೊಂಡು ವಾಪಾಸ್‌ ಕರೆದುಕೊಂಡು ಬರಲಾಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಈ ಕುರಿತು ಮಾಹಿತಿ ಪ್ರಸಾರ ಆದ ಬೆನ್ನಲ್ಲೇ ಇಂದು (ಫೆ.12) ಬೆಳ್ತಂಗಡಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಬಳೆಂಜ ಶಾಲೆಗೆ ಭೇಟಿ ನೀಡಿ ವರದಿ ಮಾಡಿಕೊಂಡು ಆ ವರದಿಯನ್ನು ಮಂಗಳೂರು ಡಿಡಿಪಿಐ ಶಶಿಧರ್‌ ಜಿ ಎಸ್‌ ಅವರಿಗೆ ಸಲ್ಲಿಸಿದ್ದರು. ನಂತರ ಡಿಡಿಪಿಐ ಅವರು ಮುಖ್ಯೋಪಾಧ್ಯಾಯ ಕಿರಣ್‌ ಅವರನ್ನು ಇಂದು (ಫೆ.12) ಮಧ್ಯಾಹ್ನ ವೇಳೆಗೆ ಅಮಾನತು ಮಾಡಿ ಆದೇಶ ಹೊರಡಿಸಿರುವ ಕುರಿತು ವರದಿಯಾಗಿದೆ.