Home » ಬಂಟ್ವಾಳ: ಹೃದಯಾಘಾತದಿಂದ 24 ರ ಹರೆಯದ ಯುವಕ ಸಾವು!

ಬಂಟ್ವಾಳ: ಹೃದಯಾಘಾತದಿಂದ 24 ರ ಹರೆಯದ ಯುವಕ ಸಾವು!

0 comments

ಬಂಟ್ವಾಳ: ತಾಲೂಕಿನ ಕುಕ್ಕಿಪಾಡಿ ಎಂಬಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಎದೆ ನೋವು ಕಾಣಿಸಿಕೊಂಡಿದ್ದು ಯುವಕನೋರ್ವ ಹೃದಯಾಘಾತದಿಂದ ಸಾವಿಗೀಡಾದ ಘಟನೆ ನಡೆದಿದೆ.

ಮೃತ ಯುವಕನನ್ನು ಪ್ರಶಾಂತ್‌ ಆಚಾರ್ಯ (24) ಎಂದು ಗುರುತಿಸಲಾಗಿದೆ.

ಕುಕ್ಕಿಪಾಡಿ ಗ್ರಾಮದ ಮಾಡಮೆ ನಿವಾಸಿ ಶ್ರೀರಾಮ ಆಚಾರ್ಯ ಅವರ ಮೂವರು ಪುತ್ರರಲ್ಲಿ ಎರಡನೆಯವನಾದ ಪ್ರಶಾಂತ್‌ ಆಚಾರ್ಯ ಸಿದ್ದಕಟ್ಟೆಯ ಯಂತ್ರೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಫೆ.22 ರಂದು ಭಾನುವಾರ ಅರಂತಾಡಿ ಮನೆಯಲ್ಲಿ ಕೃಷಿ ಸಂಬಂಧಿತ ಕೆಲಸದಲ್ಲಿ ತೊಡಗಿದ್ದಾಗ ಸುಮಾರು 11 ಗಂಟೆಯ ವೇಳೆ ಹಠಾತ್‌ ಎದೆನೋವು ಕಾಣಿಸಿದೆ. ಕೂಡಲೇ ಸಿದ್ದಕಟ್ಟೆಯ ಆಸ್ಪತ್ರೆಯಲ್ಲಿ ವೈದ್ಯರ ಸಲಹೆ ಪಡೆದು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅದಾಗಲೇ ಪ್ರಶಾಂತ್‌ ಆಚಾರ್ಯ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದ.

banner

You may also like