ಬರೋಬ್ಬರಿ 10 ಸಾವಿರದಷ್ಟು ದಲಿತರು ಜನಿವಾರವನ್ನು ಧಾರಣೆ ಮಾಡುವ ಮೂಲಕ ಬ್ರಾಹ್ಮಣ್ಯವನ್ನು ಸ್ವೀಕಾರ ಮಾಡಿರುವ ಅತ್ಯಂತ ಕುತೂಹಲಕಾರಿ ಘಟನೆ ಎಂದು ಉತ್ತರ ಪ್ರದೇಶದ ಮೇರಠ್ನಲ್ಲಿ ನಡೆದಿದೆ.


ಜನಿವಾರವು ವೇದಗಳು, ತ್ರಿಗುಣಗಳು, ಹಾಗೂ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತವೆ. ಇದನ್ನು ಸಂಪ್ರದಾಯಬದ್ಧವಾಗಿ ಧರಿಸಿದರೆ ಅವರು ಬ್ರಾಹ್ಮಣರಾಗುತ್ತಾರೆ. ಅಂಥದ್ದೇ ಒಂದು ವಿಧಿ-ವಿಧಾನದ ಮೂಲಕ 10 ಸಾವಿರ ಮಂದಿ ಈಗ ಬ್ರಾಹ್ಮಣ ಸಮುದಾಯಕ್ಕೆ ಸೇರ್ಪಡೆಯಾಗಿದ್ದಾರೆ. ಸಾಮಾಜಿಕ ತಾರತಮ್ಯ ಮತ್ತು ವಿಭಜಕ ರಾಜಕೀಯವನ್ನು ಪ್ರತಿಭಟಿಸಿ ಅವರು ಈ ಹೆಜ್ಜೆ ಇಟ್ಟಿದ್ದಾರೆ. ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಹರಡುವುದು ಅವರ ಉದ್ದೇಶವಾಗಿದೆ.
ಬ್ರಾಹ್ಮಣ್ಯ ಸ್ವೀಕರಿಸಿದ ಬಳಿಕ ಮಾತನಾಡಿದ ಕೆಲವರು ‘ ಬ್ರಾಹ್ಮಣ ಜಾತಿಯಲ್ಲಿರುವ ಆಚಾರ-ವಿಚಾರಗಳು, ಅವರ ಸಂಪ್ರದಾಯ ಎಲ್ಲವೂ ಖುಷಿಕೊಟ್ಟಿತ ಆದ್ದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಮತ್ತೆ ಕೆಲವರು, ಭೇದಭಾವದಿಂದ ಬೇಸತ್ತಿರುವ ಕಾರಣ, ಎಲ್ಲರೂ ಒಂದೇ ಎಂದು ಸಮಾನತೆಗಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ನಾವೆಲ್ಲಾ ಜಾತಿ-ಭೇದ ಮರೆತು ಒಗ್ಗಟ್ಟಾಗಿ ಇರಲು ನೋಡಿದರೂ, ನಮ್ಮ ನಮ್ಮ ನಡುವೆಯೇ ಒಡಕು ತರುವ ಮನಸ್ಥಿತಿಯವರು ಹಲವರು ಇದ್ದಾರೆ. ಕೆಲವು ರಾಜಕೀಯದವರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ನಮ್ಮ ನಡುವೆ ತಂದು ಇಡುತ್ತಿದ್ದಾರೆ. ನಮ್ಮ ಈ ನಿರ್ಧಾರದಿಂದ ಅವರೆಲ್ಲರೂ ಈಗ ಏನು ಮಾಡುತ್ತಾರೆ ಎಂದು ನೋಡೋಣ’ ಎಂದು ನಾವು ಬ್ರಾಹ್ಮಣ್ಯವನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.
https://x.com/i/status/2044080217124417761

