Home latest ಮಧ್ಯಮ ವರ್ಗದವರೇ ಮೋದಿ ಕಡೆಯಿಂದ ಹೊಸ ವರ್ಷಕ್ಕೆ ದೊರಕಲಿದೆ ಸಿಹಿ ಸುದ್ದಿ ? ಮಹತ್ವದ ಚಿಂತನೆಯಲ್ಲಿ...

ಮಧ್ಯಮ ವರ್ಗದವರೇ ಮೋದಿ ಕಡೆಯಿಂದ ಹೊಸ ವರ್ಷಕ್ಕೆ ದೊರಕಲಿದೆ ಸಿಹಿ ಸುದ್ದಿ ? ಮಹತ್ವದ ಚಿಂತನೆಯಲ್ಲಿ ಕೇಂದ್ರ ಸರಕಾರ?

Hindu neighbor gifts plot of land

Hindu neighbour gifts land to Muslim journalist

ಕೇಂದ್ರ ಸರ್ಕಾರದಿಂದ ಹೊಸ ವರ್ಷಕ್ಕೆ ಮಧ್ಯಮ ವರ್ಗದ ಜನರಿಗೆ ಸಿಹಿಸುದ್ದಿ ನೀಡಲಿದೆಯಂತೆ. ಅದೇನು ಅಂತ ಕುತೂಹಲನ ಮುಂದೆ ಇದೆ ನೋಡಿ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮತ್ತು ಕಿಸಾನ್ ವಿಕಾಸ್ ಪತ್ರ (ಕೆವಿಪಿ) ನಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳು ಹೆಚ್ಚಾಗುವ ನಿರೀಕ್ಷೆಯಿದೆ. ಈ ಕುರಿತು ಕೇಂದ್ರ ಈ ತಿಂಗಳಾಂತ್ಯದಲ್ಲಿ ನಿರ್ಧಾರ ಕೈಗೊಳ್ಳಲಿದೆ. ಇದು ನಿಜಕ್ಕೂ ಮಧ್ಯಮ ವರ್ಗದ ಜನರಿಗೆ ಹೊಸ ವರ್ಷಕ್ಕೆ ಸಿಹಿಯ ಮೇಲೊಂದು ಸಿಹಿ ಕೊಟ್ಟ ಹಾಗೆ.

ಪ್ರತಿ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪರಿಶೀಲಿಸುತ್ತದೆ. ಆದರೆ ಈಗ ದೇಸಿ ಸೆಂಟ್ರಲ್ ಬ್ಯಾಂಕ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ವರ್ಷ ರೆಪೊ ದರವನ್ನು 225 ಮೂಲ ಅಂಕಗಳಷ್ಟು ಹೆಚ್ಚಿಸಿದೆ. ಈ ಕ್ರಮದಲ್ಲಿ ಬ್ಯಾಂಕ್‌ಗಳಲ್ಲಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವೂ ಹೆಚ್ಚುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಬಹುದು ಎಂದು ವರದಿಗಳು ಹೇಳುತ್ತವೆ. ಅಂದ ಹಾಗೇ ವರದಿಗಳ ಪ್ರಕಾರ ಹೊಸ ವರ್ಷದ ಜನವರಿ ಮಾರ್ಚ್‌ 2023 ರ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳು ಹೆಚ್ಚಾಗಬಹುದು ಎಂಬ ನಿರೀಕ್ಷೆ ಹೆಚ್ಚಿವೆ.

ಇದೇ ವೇಳೆ ಕೇಂದ್ರ ಸರ್ಕಾರ ಜನರ ಉಳಿತಾಯ ಹೆಚ್ಚಿಸುವ ಉದ್ದೇಶದಿಂದ ಸಣ್ಣ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ನೀವು ನಿಯಮಿತವಾಗಿ ಹಣವನ್ನು ಉಳಿಸಬಹುದು. ಸಣ್ಣ ಉಳಿತಾಯ ಯೋಜನೆಗಳು ಮೂರು ವಿಧಗಳಾಗಿವೆ. ಯಾವುದೆಲ್ಲವೆಂದರೆ, ಉಳಿತಾಯ ಠೇವಣಿಗಳು, ಸಾಮಾಜಿಕ ಭದ್ರತಾ ಯೋಜನೆಗಳು, ಮಾಸಿಕ ಆದಾಯ ಯೋಜನೆ. ಈ ಪೈಕಿ ಜನರು ತಮ್ಮ ಆಯ್ಕೆಯ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಣವನ್ನು ಉಳಿಸಬಹುದು.

ಉಳಿತಾಯ ಠೇವಣಿಗಳಲ್ಲಿ ಒಂದು ವರ್ಷ, ಮೂರು ವರ್ಷಗಳ ಕಾಲಾವಧಿ ಠೇವಣಿಗಳು ಮತ್ತು ಐದು ವರ್ಷಗಳ ಅವಧಿಯೊಂದಿಗೆ ಮರುಕಳಿಸುವ ಠೇವಣಿಗಳು ಸೇರಿವೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರವನ್ನು ಸಹ ಇವುಗಳ ಅಡಿಯಲ್ಲಿ ಕ್ಲೈಮ್ ಮಾಡಲಾಗುತ್ತದೆ. ಸಾಮಾಜಿಕ ಭದ್ರತಾ ಯೋಜನೆಗಳಾದ ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಮಾಸಿಕ ಆದಾಯದ ಖಾತೆಯನ್ನು ಮಾಸಿಕ ಆದಾಯ ಯೋಜನೆಯಡಿಯಲ್ಲಿ ಕರೆಯಲಾಗುತ್ತದೆ.

ತ್ರೈಮಾಸಿಕ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರಸರಕಾರ ಈಗಾಗಲೇ ಹೆಚ್ಚಿಸಿದೆ. ಆದರೆ ಇಲ್ಲಿ ನಾವು ಗಮನದಲ್ಲಿಡಬೇಕಾದುದು ಏನೆಂದರೆ ಇದು ಕೆಲವು ಯೋಜನೆಗಳಿಗೆ ಮಾತ್ರ ಅನ್ವಯವಾಗುತ್ತದೆ.