AAP: ಅಮ್ ಆದ್ಮಿ ಪಕ್ಷಕ್ಕೆ ಯುವ ಸಂಸದ ರಾಘವ್ ಚಡ್ಡಾ ಅವರು ಇದೀಗ ಪಕ್ಷಕ್ಕೆ ಗುಡ್ ಬೈ ಹೇಳಿ, ರಾಜೀನಾಮೆ ನೀಡಿದ್ದಾರೆ.


ಯಸ್, ಆಮ್ ಆದ್ಮಿ ಪಕ್ಷ (ಆಪ್)ದ ಭವಿಷ್ಯ ಎಂದೇ ಪರಿಗಣಿಸಲಾಗಿದ್ದ ರಾಘವ್ ಚಡ್ಡಾ ಅವರು ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ರಾಘವ್ ಚಡ್ಡಾ ಜೊತೆ ರಾಜ್ಯಸಭೆಯಲ್ಲಿನ ಆಮ್ ಆದ್ಮಿ ಪಕ್ಷದಲ್ಲಿರುವ ಒಟ್ಟು 10 ಸಂಸದರ ಪೈಕಿ ಏಳು ಸಂಸದರು ಕೂಡ ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದಾರೆ.
ಆಮ್ ಆದ್ಮಿ ಪಾರ್ಟಿಗೆ ರಾಜೀನಾಮೆ ನೀಡಿದ 7 ಸಂದರು
ರಾಘವ್ ಚಡ್ಡಾ
ಸಂದೀಪ್ ಪಾಠಕ್
ಅಶೋಕ್ ಮಿತ್ತಲ್
ಸ್ವಾತಿ ಮಲಿವಾಲ್
ಹರ್ಭಜನ್ ಸಿಂಗ್
ರಾಜಿಂದರ್ ಗುಪ್ತ
ವಿಕ್ರಮ ಸಹ್ನಿ
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಘವ್ ಚಡ್ಡಾ, “ಸೈದ್ಧಾಂತಿಕ ಭಿನ್ನಾಭಿಪ್ರಾಯ”ಗಳಿಂದಾಗಿ ಆಪ್ ಪಕ್ಷ ತೊರೆಯುತ್ತಿರುವುದಾಗಿ ಸ್ಪಷ್ಟಪಡಿಸಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಈ ಮಹತ್ವದ ಬೆಳವಣಿಗೆಯು, ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

