Home » ಕಲಾವಿದರಿಗೆ ಬೆದರಿಕೆ ಆರೋಪ; ಮಹೇಶ್‌ ಶೆಟ್ಟಿ ತಿಮರೋಡಿಗೆ ನಿರೀಕ್ಷಣಾ ಜಾಮೀನು ಮಂಜೂರು

ಕಲಾವಿದರಿಗೆ ಬೆದರಿಕೆ ಆರೋಪ; ಮಹೇಶ್‌ ಶೆಟ್ಟಿ ತಿಮರೋಡಿಗೆ ನಿರೀಕ್ಷಣಾ ಜಾಮೀನು ಮಂಜೂರು

0 comments
Dharmasthala Soujanya

ಪುತ್ತೂರು; ಕಲಾವಿದರಿಗೆ ಅವಾಚ್ಯ ಶಬ್ದಗಳ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಮಹೇಶ್‌ ಶೆಟ್ಟಿ ತಿಮರೋಡಿ ಅವರಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಖ್ಯಾತ ಕಲಾವಿದ ಸುಂದರ್‌ ರೈ ಮಂದಾರ, ಪ್ರಜ್ವಲ್‌ ಕುಮಾರ್‌ ಗುರುವಾಯನಕೆರೆ ಅವರು ಅಭಿನಯ ಮಾಡಿದ ನಮ್ಮ ಕುಡ್ಲ ಟಿವಿ ವಾಹಿನಿಯಲ್ಲಿ ʼಯಕ್ಷ ತೆಲಿಕೆʼ ಎನ್ನುವ ಕಾರ್ಯಕ್ರಮದ ಎಪಿಸೋಡ್‌ ಒಂದಕ್ಕೆ ʼಬುರುಡೆʼ ಎನ್ನುವ ಶೀರ್ಷಿಕೆಯನ್ನು ನೀಡಲಾಗಿತ್ತು. ಈ ಶೀರ್ಷಿಕೆಯ ಕುರಿತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಅಸಮಾಧಾನಗೊಂಡಿದ್ದು, ಕಲಾವಿದ ಪ್ರಜ್ವಲ್‌ ಕುಮಾರ್‌ಗೆ ಕರೆ ಮಾಡಿ ತೀವ್ರ ನಿಂದನೆ ಮಾಡಿದ ಆರೋಪವಿತ್ತು.

ಆಡಿಯೋ ಸಂಭಾಷಣೆಯ ಆಧಾರದಲ್ಲಿ ಸುಂದರ್‌ ರೈ ಮಂದಾರ ಅವರು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ದೂರಿನನ್ವಯ ಪೊಲೀಸರು ಮಹೇಶ್‌ ಶೆಟ್ಟಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಈ ಪ್ರಕರಣಕ್ಕೆ ಕುರಿತಂತೆ ಬಂಧನದ ಭೀತಿಯಲ್ಲಿದ್ದ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸದ್ದರು. ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯವು ಜೂನ್‌ 4 ರಂದು ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

banner

You may also like