Home Interesting Bore Point: ತೆಂಗಿನಕಾಯಿ ಹಿಡಿದರೆ ನೀರು ಸಿಗುತ್ತಾ? ಈ ಬಗ್ಗೆ ಸೈನ್ಸ್ ಹೇಳೋದೇನು?

Bore Point: ತೆಂಗಿನಕಾಯಿ ಹಿಡಿದರೆ ನೀರು ಸಿಗುತ್ತಾ? ಈ ಬಗ್ಗೆ ಸೈನ್ಸ್ ಹೇಳೋದೇನು?

Hindu neighbor gifts plot of land

Hindu neighbour gifts land to Muslim journalist

Bore Point: ಭಾರತ ಕೃಷಿ ಪ್ರಧಾನವಾದ ರಾಷ್ಟ್ರ. ಭಾರತದಲ್ಲಿ ಅನೇಕ ಕುಟುಂಬಗಳು ಕೃಷಿಯನ್ನು ನಂಬಿ ಬದುಕುತ್ತಿವೆ. ಕೃಷಿ ಮಾಡಲು ಮುಖ್ಯವಾಗಿ ಬೇಕಾಗಿರುವಂಥದ್ದು ನೀರು. ಆದರೆ ಭಾರತದ ಅನೇಕ ಕಡೆಗಳಲ್ಲಿ ನೀರಿನ ಸೌಲಭ್ಯವಿಲ್ಲ. ಹೀಗಾಗಿ ರೈತರು ಬೋರ್ವೆಲ್ ಗಳನ್ನು ಕೊರೆಸಿ ತಮ್ಮ ಕೃಷಿಗೆ ನೀರಿನ ಸೌಲಭ್ಯವನ್ನು ಕಲ್ಪಿಸಿಕೊಳ್ಳುತ್ತಾರೆ. ಈ ಬೋರ್ ಕೊರೆಸುವಾಗ ಅಂತರ್ಜಲವನ್ನು ನೋಡುವುದು ಸಹಜ. ಇದನ್ನು ಬೋರ್ ಪಾಯಿಂಟ್(Bore Point) ನೋಡುವುದು ಅನ್ನುತ್ತಾರೆ. ಅದರಲ್ಲಿ ತೆಂಗಿನಕಾಯಿ ಹಿಡಿದು ಬೋರ್ ಪಾಯಿಂಟ್ ನೋಡುವುದು ಒಂದು ವಿಧಾನವಾಗಿದೆ. ಹಾಗಿದ್ರೆ ತೆಂಗಿನಕಾಯಿ ಹಿಡಿದರೆ ನೀರು ಸಿಗುತ್ತದೆಯಾ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತೆ ನೋಡೋಣ.

ಹೌದು, ಹಳ್ಳಿಗಳಲೆಲ್ಲಾ ಇಂದಿಗೂ ಪ್ರಸಿದ್ದಿಯಾಗಿ, ಹೆಚ್ಚು ಚಾಲ್ತಿಯಲ್ಲಿರುವುದು ತೆಂಗಿನಕಾಯಿ ಹಿಡಿದು ನೀರು ನೋಡುವುದು. ತದನಂತರ ಉಳಿದವುಗಳಿಗೆ ಸ್ಥಾನ. ಇಂದಿನ ಕಾಲದಲ್ಲಿ ತಂತ್ರಜ್ಞಾನ ಎಷ್ಟೇ ವೇಗವಾಗಿ ಮುಂದುವರೆದಿದ್ದರೂ.. ಇಂದಿಗೂ ಕೆಲ ಗ್ರಾಮೀಣ ಪ್ರದೇಶದ ಜನರು ನೀರಿನ ಕುರುಹು ಹುಡುಕಲು ಸಾಂಪ್ರದಾಯಿಕ ವಿಧಾನಗಳನ್ನೇ ಫಾಲೋ ಮಾಡುತ್ತಿದ್ದಾರೆ. ನೀರಿರುವ ಜಾಗದಲ್ಲಿ ತೆಂಗಿನಕಾಯಿ ತಾನಾಗಿಯೇ ಮೇಲೆ ಏಳುತ್ತದೆ. ಇದು ದಶಕಗಳಿಂದ ನಡೆದುಬಂದಿರುವ ನಂಬಿಕೆ. ಆದರೆ, ಈ ತೆಂಗಿನಕಾಯಿಗೆ ಯಾವುದೇ ವಿಶೇಷ ಶಕ್ತಿಯಿದೆ ಎಂಬುದು ವೈಜ್ಞಾನಿಕವಾಗಿ ಈವರೆಗೂ ಸಾಬೀತಾಗಿಲ್ಲ.ಹಾಗಿದ್ದಲ್ಲಿ, ಇವರು ತೋರಿಸಿದ ಜಾಗದಲ್ಲೇ ನೀರು ಬೀಳಲು ಕಾರಣವೇನು? ತಜ್ಞರ ಪ್ರಕಾರ ಇದಕ್ಕೆ ಮುಖ್ಯವಾಗಿ ಮೂರು ಕಾರಣಗಳಿವೆ

ಅನುಭವದ ಅಂದಾಜು: ನೀರು ಪತ್ತೆ ಹಚ್ಚುವವರು ಆ ಪ್ರದೇಶದ ಮಣ್ಣಿನ ಬಣ್ಣ, ಅಲ್ಲಿ ಬೆಳೆಯುವ ಮರಗಳ ಸ್ವಭಾವ (ಉದಾಹರಣೆಗೆ ಅತ್ತಿಮರ, ಹೊನ್ನೆ ಮರ), ಭೂಮಿಯ ಇಳಿಜಾರು ಮತ್ತು ಹತ್ತಿರದ ಹಳೆಯ ಬಾವಿಗಳ ಆಳವನ್ನು ಗಮನಿಸಿ ನೀರಿನ ಸೆಲೆ ಇರಬಹುದಾದ ಜಾಗವನ್ನು ಊಹಿಸುತ್ತಾರೆ.

ನೈಸರ್ಗಿಕ ಲಭ್ಯತೆ: ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು ಭೂಮಿಯ ಅಡಿಯಲ್ಲಿ ವ್ಯಾಪಕವಾಗಿ ಹರಡಿರುತ್ತದೆ. ಹೀಗಾಗಿ, ಅವರು ತೋರಿಸಿದ ನಾಲ್ಕೈದು ಪಾಯಿಂಟ್ಗಳಲ್ಲಿ ಯಾವುದಾದರೊಂದು ಕಡೆ ನೀರು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಐಡಿಯೊಮೋಟರ್ ಎಫೆಕ್ಟ್ (Ideomotor Effect): ನಮಗೆ ಅರಿವಿಲ್ಲದಂತೆ ನಮ್ಮ ಮನಸ್ಸಿನ ಆಲೋಚನೆಗೆ ತಕ್ಕಂತೆ ನಮ್ಮ ಸ್ನಾಯುಗಳು ಸಣ್ಣದಾಗಿ ಚಲಿಸುತ್ತವೆ. ತೆಂಗಿನಕಾಯಿ ಮೇಲೆ ಏಳುವುದು ಅಥವಾ ಕಡ್ಡಿ ತಿರುಗುವುದು ಮನುಷ್ಯನ ಕೈಗಳ ಅರಿವಿಲ್ಲದ ಚಲನೆಯಿಂದಾಗುತ್ತದೆಯೇ ಹೊರತು ನೀರಿನ ಶಕ್ತಿಯಿಂದಲ್ಲ ಎಂದು ವಿಜ್ಞಾನ ಹೇಳುತ್ತದೆ.

 

ಇನ್ನು ಕೆಲವು ಪ್ರದೇಶಗಳಲ್ಲಿ ಸಾಕಷ್ಟು ನೀರಿನ ಮೂಲಗಳು ಇರುತ್ತವೆ, ಈ ಸಂದರ್ಭದಲ್ಲಿ ಯಾವುದೇ ವಿಧಾನದಿಂದ ನೋಡಿದ್ರು ನೀರು ಸಿಗುತ್ತದೆ. ಅವೈಜ್ಞಾನಿಕವಾಗಿ ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ನೋಡಿದ್ರೂ ನೀರು ಸಿಕ್ಕೇ ಸಿಗುತ್ತೆ. ಇದೇ ಕಾರಣದಿಂದ ರೈತರು ಆ ವಿಧಾನಗಳನ್ನು ನಂಬುತ್ತಾರೆ. ಸಾಕಷ್ಟು ನೀರು ಇರುವ ಪ್ರದೇಶದಲ್ಲಿ ಯಾವುದೇ ವಿಧಾನಗಳನ್ನು ಫಾಲೋ ಮಾಡಿದ್ರು ಬೋರ್ ಕೊರೆದರೆ ನೀರು ಸಿಗುತ್ತದೆ.

 

ವೈಜ್ಞಾನಿಕ ವಿಧಾನ ನಂಬಲರ್ಹವೇ?

ಸಾಮಾನ್ಯವಾಗಿ ಭೂವಿಜ್ಞಾನಿಗಳು ವಿದ್ಯುತ್ ನಿರೋಧಕ ಮೀಟರ್ ಬಳಸಿಕೊಂಡು ನೀರಿನ ಕುರುಹುಗಳನ್ನು ಹುಡುಕುತ್ತಾರೆ. ವೈಜ್ಞಾನಿಕ ವಿಧಾನಗಳನ್ನು ನೂರಕ್ಕೆ ನೂರು ನಂಬಬಹುದು. ಆದರೆ ಅವೈಜ್ಞಾನಿಕ ವಿಧಾನಗಳಿಗೆ ಈ ರೀತಿಯ ಯಾವುದೇ ಸಾಕ್ಷಾಧಾರಗಳಿಲ್ಲ. ಆದ್ದರಿಂದ ಹೆಚ್ಚಿನವರು ವೈಜ್ಞಾನಿಕವಾಗಿ ನೀರಿನ ಕುರುಹುಗಳನ್ನು ಪತ್ತೆ ಮಾಡಿದರೆ ಒಳ್ಳೆಯದು ಎನ್ನುತ್ತಾರೆ ವಿಜ್ಞಾನಿಗಳು. ಆದ್ರೆ ಅವೈಜ್ಞಾನಿಕ ವಿಧಾನಗಳ ಜೊತೆಗೆ, ಕೆಲವೊಮ್ಮೆ ಭೂವಿಜ್ಞಾನಿಗಳು ಮಾಡಿದ ಸಂಶೋಧನೆಗಳು ಸಹ ಈ ಬರ ಪ್ರದೇಶಗಳಲ್ಲಿ ವಿಫಲಗೊಳ್ಳುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.