Home Interesting ಅಂತರ್ಜಾತಿ ಮದುವೆಗೆ ನಿರಾಕರಿಸಿದ ಹೆತ್ತವರು |ಮನನೊಂದು ಪ್ರೇಮಿಗಳು ಜೊತೆಯಾಗಿ ನೇಣಿಗೆ ಶರಣು |ಬದುಕಿದ್ದಾಗ ಒಂದಾಗದ ಅಮರ...

ಅಂತರ್ಜಾತಿ ಮದುವೆಗೆ ನಿರಾಕರಿಸಿದ ಹೆತ್ತವರು |ಮನನೊಂದು ಪ್ರೇಮಿಗಳು ಜೊತೆಯಾಗಿ ನೇಣಿಗೆ ಶರಣು |ಬದುಕಿದ್ದಾಗ ಒಂದಾಗದ ಅಮರ ಪ್ರೇಮ ಸಾವಿನಲ್ಲಿ ಜೊತೆಯಾಯ್ತು

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ಸಂಬಂಧವೇ ಹೀಗೆ ಅದೆಷ್ಟು ದೂರ ಇರಬೇಕು ಎಂದೆನಿಸಿದರೂ ಉಳಿಯಲಾಗದ ಬಂಧ. ಅದೇ ಪ್ರೀತಿ. ನಿಜವಾದ ಸ್ನೇಹ ಸಾಯುವವರೆಗೂ ಜೊತೆಯಾಗಿ ಇರುತ್ತಂತೆ. ಅದೆಷ್ಟೇ ಅಡ್ಡಿ ಆತಂಕ ಎದುರಾದರೂ ನಾವಿಬ್ಬರು ಒಂದೇ ಎನ್ನುವ ಭಾವನೆಯಷ್ಟು ಬೆರೆತೋಗಿರುತ್ತೆ ಈ ಪ್ರೀತಿ. ಅಂತಹುದೇ ನಿಷ್ಕಲ್ಮಶ ಮನಸ್ಸಿನಿಂದ ಪ್ರೀತಿಯಲ್ಲಿ ತೇಲುತಿದ್ದ ಜೋಡಿಗೆ ಮನೆಯವರೇ ದುಷ್ಮನ್!!

ಹೌದು.ಇಲ್ಲಿಬ್ಬರು ಪ್ರೇಮಿಗಳು ಕುಟುಂಬದ ವಿರೋಧಕ್ಕೆ ಹೆದರಿ ಬದುಕನ್ನೇ ಕೊನೆ ಮಾಡಿಕೊಂಡಿದ್ದಾರೆ. ಅವರಿಬ್ಬರದ್ದು ಜಾತಿ ಬೇರೆ ಬೇರೆ ಆಗಿದ್ದರಿಂದ ಸಹಜವಾಗಿಯೇ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತ ಪಡಿಸಿದ್ದರು, ಅವರು ವಿರೋಧ ವ್ಯಕ್ತ ಪಡಿಸಿದ್ದಕ್ಕೆ ಮನನೊಂದ ಈ ಪ್ರೇಮಿಗಳು ಜೊತೆಯಾಗಿ ಬದುಕಿಗೆ ಅಂತ್ಯ ಹಾಡಿದ್ದಾರೆ.

ಬಾಳಿನುದ್ದಕ್ಕೂ ಜೊತೆಯಾಗಿ ಹೆಜ್ಜೆ ಹಾಕಬೇಕು ಎಂದು ಕೊಂಡಿದ್ದ ಜೋಡಿಗೆ ಮನೆಯವರೇ ಅಡ್ಡ ಗೋಡೆಯಾದರೂ. ಆದರೆ ಸತ್ತರೂ ನಾವಿಬ್ಬರು ಒಟ್ಟಿಗೆ ಇರಬೇಕು ಎಂದುಕೊಂಡು ಸಾವಿನಲ್ಲೂ ಜೊತೆಯಾಗಿರಬೇಕೆಂದು ನೇಣಿಗೆ ಕೊರಳೊಡ್ಡಿ ಬದುಕಿಗೆ ಫುಲ್ ಸ್ಟಾಪ್ ಇಟ್ಟಿರುವ ಈ ಪ್ರೇಮಿಗಳ ಮನಕಲಕುವ ಘಟನೆ ಬಸವಕಲ್ಯಾಣ ತಾಲೂಕಿನ ಕಲಖೊರಾ ತಾಂಡದ ಬಳಿ ಇರುವ ಗ್ರಾಮದಲ್ಲಿ ನಡೆದಿದೆ.

ಕಮಲಾಪೂರ ತಾಲೂಕಿನ ಓಕಳಿ ಗ್ರಾಮದ ನಿವಾಸಿ ರಮೇಶ್ ಭೀಮಶಾ ಬೇಡರ್ (28) ಮತ್ತು ಅದೇ ಗ್ರಾಮದ ಭಿಮಾಬಾಯಿ ಅಶೋಕ್ ರಾಠೋಡ್ (19) ಯುವತಿ ಹಲವಾರು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ ಸುಂದರ ಬದುಕಿನ ಕನಸು ಕಂಡಿದ್ದ ಇವರು ವಿವಾಹವಾಗಲು ಕೂಡ ಇಚ್ಚಿಸಿದ್ದರು, ಆದರೆ ಇವರಿಬ್ಬರ ಜಾತಿ ಬೇರೆ ಬೇರೆಯಾದ್ದರಿಂದ ಕುಟುಂಬದ ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ಜತೆಗೆ ಎರಡೂ ಕುಟುಂಬದ ನಡುವೆ ಮಾತುಕತೆಯೂ ನಡೆದಿದ್ದು, ಇಬ್ಬರನ್ನ ಬೇರೆ ಬೇರೆ ಮಾಡಲಾಗಿತ್ತು. ಇಬ್ಬರೂ ಇನ್ಮುಂದೆ ಸೇರದಂತೆ ಕೂಡಾ ಮನೆಯಲ್ಲಿ ತಾಕೀತು ಮಾಡಿದ್ದರು. ಕುಟುಂಬಸ್ಥರ ಕಟ್ಟಪ್ಪಣೆಗೆ ಈ ಜೋಡಿ ಹೆದರಿಕೊಂಡು ನೇಣಿಗೆ ಶರಣಾಗಿದೆ.

ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದ ಪ್ರೇಮಿಗಳು ಈ ಎಲ್ಲ ಬೆಳವಣಿಗೆಗಳಿಂದ ತೀವ್ರವಾಗಿ ಮನನೊಂದಿದ್ದರು. ಹೇಗಾದರೂ ಸರಿ ಕುಟುಂಬಸ್ಥರ ಮನವೊಲಿಸಿ ಮದುವರೆಯಾಗುವ ಪ್ರಯತ್ನ ಮಾಡಿದ್ದರು. ಆದ್ರೆ ಆ ಜೋಡಿ ಅದೇನೇ ಮಾಡಿದರು ಸಹ ಇಬ್ಬರ ಕುಟುಂಬಸ್ಥರು ಈ ಅಂತರ್ಜಾತಿ ವಿವಾಹಕ್ಕೆ ಸುತಾರಾಂ ಒಪ್ಪಿಗೆ ಕೊಡಲಿಲ್ಲ. ಇದರಿಂದಾಗಿ ಹತಾಷೆಗೆ ಜಾರಿದ ಜೋಡಿ ಇಬ್ಬರೂ ಹಲವು ದಿನಗಳ ವರೆಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಹೀಗಾಗಿ ಇನ್ನು ಎರಡೂ ಕುಟುಂಬಗಳನ್ನ ಎದುರು ಹಾಕಿಕೊಂಡು ಮದುವೆಯಾಗೋದು ಸಾದ್ಯವೇ ಇಲ್ಲ ಅನ್ನೋದು ಇವರ ಅರಿವಿಗೆ ಬರುತ್ತಿದ್ದಂತೆ ಅವರಿಬ್ಬರೂ ಅದೊಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದರು.ಬದುಕಿದ್ದಾಗ ನಾವು ಒಂದಾಗೋದಕ್ಕೆ ಆಗದೇ ಹೋದರೂ ಪರವಾಗಿಲ್ಲ, ಕೊನೆ ಪಕ್ಷ ಸಾವಿನಲ್ಲಾದರೂ ನಾವೂ ಒಂದಾಗೋಣವೆಂದು ಗಟ್ಟಿ ನಿರ್ಧಾರ ಮಾಡಿಕೊಂಡ ಪ್ರೇಮಿಗಳು ಅದರಂತೆ ಇಬ್ಬರು ನಿಶ್ಚಯಿಸಿಕೊಂಡು ರಮೇಶ್ ಹಾಗೂ ಭೀಮಾಬಾಯಿ ಈ ಜೋಡಿಯು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕಲಖೋರಾ ತಾಂಡದ ಬಳಿ ಭೇಟಿಯಾಗಿದ್ದಾರೆ. ಅಲ್ಲಿ ಒಂದಿಷ್ಟು ಹೊತ್ತು ಮನಸೋ ಇಚ್ಚೇ ರೋಧಿಸಿದ ಪ್ರೇಮಿಗಳು ಕೊನೆಗೆ ತಮ್ಮ ಮದುವೆಯನ್ನ ಈ ಸಮಾಜ ಒಪ್ಪಲಾರದು ಎಂದು ಅರಿತುಕೊಂಡು ನೇಣಿಗೆ ಕೊರಳೊಡ್ಡಲು ನಿರ್ಧರಿಸಿ, ಮರದ ಕೊಂಬೆಗೆ ಯುವತಿ ವೇಲ್ ಬಿಗಿದುಕೊಂಡು ಇಬ್ಬರು ಸಾವಿನಲ್ಲಿ ಒಂದಾಗಿದ್ದಾರೆ.

ಇತ್ತ ಸುದ್ದಿ ತಿಳಿದ ಗ್ರಾಮಸ್ಥರು ವಿಷಯವನ್ನ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮುಡಬಿ ಪೊಲೀಸ್ರು ಪೋಷಕರನ್ನ ಕರೆಸಲಾಗಿದೆ, ಎರಡೂ ಕುಟುಂಬಗಳ ಇವರ ದುಢುಕಿನ ನಿರ್ಧಾರಕ್ಕೆ ಕಣ್ಣಿರಾಗಿದ್ದಾರೆ. ಕರುಳ ಬಳ್ಳಿಗಳನ್ನ ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ..ಮದುವೆಗಾಗಿ ಮಾತು ಮುಂದುವರಿಸಿದ ಹೆತ್ತವರಿಗೆ ಸಾವಿನ ಸೂತಕದ ಛಾಯೆ!!