Home Food ನೀರು ಕೂಡ ಅನಾರೋಗ್ಯಕ್ಕೆ ಕಾರಣವಾಗಬಹುದು ಹುಷಾರ್ | ಈ ಆಹಾರ ಸೇವಿಸಿದ ಬಳಿಕ ಕುಡಿಯದಿರಿ ನೀರು!

ನೀರು ಕೂಡ ಅನಾರೋಗ್ಯಕ್ಕೆ ಕಾರಣವಾಗಬಹುದು ಹುಷಾರ್ | ಈ ಆಹಾರ ಸೇವಿಸಿದ ಬಳಿಕ ಕುಡಿಯದಿರಿ ನೀರು!

Hindu neighbor gifts plot of land

Hindu neighbour gifts land to Muslim journalist

ನೀರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇರಿಲ್ಲವೆಂದ್ರೆ ಒಂದೊಂದೇ ಸಮಸ್ಯೆ ಶುರುವಾಗುತ್ತದೆ. ದೇಹ ನಿರ್ಜಲೀಕರಣಗೊಳ್ಳುತ್ತದೆ. ಪ್ರತಿ ದಿನ ನಿರ್ದಿಷ್ಟ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕು. ನೀರು ದೇಹದ ಒಳ ಅಂಗಾಗಳನ್ನು ಸ್ವಚ್ಛಗೊಳಿಸುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳು ಹೊರಹೋಗುತ್ತದೆ, ಚರ್ಮ ಸುಕ್ಕುಗಟ್ಟುವುದನ್ನು ಕಾಪಾಡುತ್ತದೆ. ಬಾಯಾರಿಕೆ ನೀಗಿಸುತ್ತದೆ. ಹೀಗೆ ನೀರಿನ ಬಗ್ಗೆ ನಾನಾ ರೀತಿಯ ಆರೋಗ್ಯಕರ ಪ್ರಯೋಜನಗಳಿವೆ.

ನೀರು ಕುಡಿಯಬೇಕು ಎನ್ನುವ ಕಾರಣಕ್ಕೆ ಕೆಲವರು ಅತಿ ಹೆಚ್ಚು ನೀರಿನ ಸೇವನೆ ಮಾಡ್ತಾರೆ. ದಿನಕ್ಕೆ ಐದಾರು ಲೀಟರ್ ನೀರು ಕುಡಿಯುವವರಿದ್ದಾರೆ. ಕಡಿಮೆ ನೀರು ಕುಡಿಯೋದು ದೇಹಕ್ಕೆ ಹೇಗೆ ಹಾನಿಕಾರಕವೋ ಅದೇ ರೀತಿ ಹೆಚ್ಚು ನೀರು ಕುಡಿಯೋದು ಕೂಡ ಅಪಾಯಕಾರಿ. ಹೌದು. ನೀರು ಕೂಡ ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಯಾವುದೇ ವಸ್ತುವಾದರೂ ಅದು ಒಳ್ಳೆಯದೆಂದು ಅತಿಯಾಗಿ ಸೇವಿಸಿದರೆ ಅವು ಆರೋಗ್ಯಕರ ದೇಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆರೋಗ್ಯವಾಗಿರಲು ನೀರು ಎಷ್ಟು ಮುಖ್ಯವೋ ಅಷ್ಟೇ ನೀರು ಸೇವಿಸೋದು ಮುಖ್ಯ.

ದಿನವಿಡೀ 7-8 ಲೋಟ ನೀರು ಕುಡಿಯುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗೆಯೇ ಆಹಾರ ಸೇವಿಸಿದ ನಂತರ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೆ ಕೆಲವು ಆಹಾರಗಳನ್ನ ಸೇವಿಸಿದ ನಂತರ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಿದ್ರೆ ಬನ್ನಿ ನಿಯಮಿತಕ್ಕಿಂತ ಹೆಚ್ಚಾಗಿ ನೀರು ಈ ಆಹಾರ ತಿಂದ ಮೇಲೆ ಕುಡಿದ್ರೆ ಯಾವೆಲ್ಲ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂಬುದನ್ನು ತಿಳಿಯೋಣ.

ಹಾಲು:
ಹಾಲು ಕುಡಿದ ನಂತರ ನೀರು ಕುಡಿಯಬೇಡಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಲಿನ ನಂತರ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಸ್ಟ್ರಾಬೆರಿ:
ಹುಳಿ-ಸಿಹಿ ಸ್ಟ್ರಾಬೆರಿ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಇದು ಆರೋಗ್ಯಕ್ಕೂ ಪ್ರಯೋಜನಕಾರಿ. ಆದರೆ ಈ ಹಣ್ಣನ್ನು ತಿಂದ ನಂತರ ನೀರು ಕುಡಿಯುವುದು ತುಂಬಾ ಹಾನಿಕಾರಕ. ಸ್ಟ್ರಾಬೆರಿಯಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ನೀರು ಅನಿಲವನ್ನು ಉಂಟುಮಾಡುತ್ತದೆ. ಇದು ಅಸಿಡಿಟಿ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನ ಉಂಟುಮಾಡುತ್ತದೆ.

ನೆಲಗಡಲೆ:
ನೆಲಗಡಲೆಯಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಎಣ್ಣೆ ಮತ್ತು ಕೊಬ್ಬು ಕೂಡ ಇದರಲ್ಲಿ ಸಮೃದ್ಧವಾಗಿದೆ. ಈ ಕಾರಣದಿಂದಾಗಿ, ಕಡಲೆಕಾಯಿ ತಿಂದ ನಂತರ ನೀರು ಕುಡಿಯುವುದು ಹಾನಿಕಾರಕವಾಗಿದೆ. ಕಡಲೆಕಾಯಿ ತಿಂದ ನಂತರ ನೀರು ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮು ಸಮಸ್ಯೆ ಉಂಟಾಗುತ್ತದೆ.

ಜಾಮೂನ್ (ಬ್ಲ್ಯಾಕ್ ಬೆರ್ರಿ):
ಜಾಮೂನ್ ತಿನ್ನಲು ರುಚಿಕರವಾಗಿ ಕಾಣುತ್ತದೆ. ಜಾಮೂನ್ ತಿಂದ ನಂತರ ನೀರು ಕುಡಿದರೆ ಅನಾರೋಗ್ಯ ಕಾಡಬಹುದು. ಜಾಮೂನ್ ತಿಂದ ತಕ್ಷಣ ನೀರು ಕುಡಿದರೆ ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳು ಬರುತ್ತವೆ. ಈ ಕಾರಣದಿಂದಾಗಿ, ಹಲ್ಲಿನ ಸೂಕ್ಷ್ಮತೆಯ ಅಪಾಯವೂ ಇದೆ.

ಸೇಬು:
ಆಪಲ್ ಕಬ್ಬಿಣ, ವಿಟಮಿನ್ ಮತ್ತು ಫೈಬರ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ತಿಂದ ನಂತರ ನೀರು ಕುಡಿಯುವುದನ್ನು ತಪ್ಪಿಸಿ. ಸೇಬಿನ ನಂತರ ನೀರು ಕುಡಿಯುವುದರಿಂದ ಕರುಳಿಗೆ ಹಾನಿಯಾಗುತ್ತದೆ.

ಕಲ್ಲಂಗಡಿ:
ಕಲ್ಲಂಗಡಿಯಲ್ಲಿ ನೀರು ಸಮೃದ್ಧವಾಗಿದೆ. ಆದಾಗ್ಯೂ, ಅನೇಕ ಜನರು ಕಲ್ಲಂಗಡಿ ತಿಂದ ನಂತರ ನೀರು ಕುಡಿಯುತ್ತಾರೆ. ಹೀಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕಲ್ಲಂಗಡಿ ತಿನ್ನುವುದರಿಂದ ಜೀರ್ಣಕಾರಿ ರಸವು ದುರ್ಬಲಗೊಳ್ಳುತ್ತದೆ. ಇದು ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನ ಉಂಟು ಮಾಡುತ್ತದೆ. ಹೀಗಾಗಿ ಇಂತಹ ಆಹಾರ ತಿಂದ ಬಳಿಕ ನೀರಿನ ಸೇವನೆ ಮಾಡದಿರೋದೇ ಉತ್ತಮ ಎನ್ನಬಹುದು.