Home » ಮಾಟಮಂತ್ರ ಶಂಕೆ: ವೃದ್ಧನಿಗೆ ಬಲವಂತದಿಂದ ಮೂತ್ರ ಕುಡಿಸಿದ ಗ್ರಾಮಸ್ಥರು

ಮಾಟಮಂತ್ರ ಶಂಕೆ: ವೃದ್ಧನಿಗೆ ಬಲವಂತದಿಂದ ಮೂತ್ರ ಕುಡಿಸಿದ ಗ್ರಾಮಸ್ಥರು

0 comments
Benefits of urine

ವ್ಯಕ್ತಿಯೊಬ್ಬರಿಗೆ ಹಳ್ಳಿಯ ಜನರು ಬಲವಂತದಿಂದ ಮೂತ್ರ ಕುಡಿಸಿರುವ ಘಟನೆ ಜಾರ್ಖಂಡ್‌ನ ಲಾತೇಹಾರ್‌ ಜಿಲ್ಲೆಯಲ್ಲಿ ನಡೆದಿದೆ. ಮಾಟಮಂತ್ರವನ್ನು ವೃದ್ಧರೊಬ್ಬರು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿ ಮೂತ್ರ ಕುಡಿಸಿದ್ದಾರೆ. ಗ್ರಾಮದಲ್ಲಿ ಇತ್ತೀಚೆಗೆ ರಸ್ತೆ ಅಪಘಾತ ನಡೆದಿದ್ದು, ಅದಕ್ಕೂ ಇವರಿಗೂ ಸಂಬಂಧವನ್ನು ಕಲ್ಪಿಸಿ ಈ ಕೃತ್ಯ ಮಾಡಿದ್ದಾರೆ. ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ವೀರೇಂದ್ರ ಸಿಂಗ್‌ ಕಾರಣ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಸುಮಾರು 15 ಗ್ರಾಮಸ್ಥರು ಸಭೆ ಮಾಡಿ ವೃದ್ಧರೊಬ್ಬರ ಮೇಲೆ ಮಾಟಮಂತ್ರದ ಆರೋಪವನ್ನು ಹೊರಿಸಿ ಮೂತ್ರ ಸೇವಿಸುವಂತೆ ಒತ್ತಾಯ ಮಾಡಿದ್ದಾರೆ. ಘಟನೆಯ ಸಮಯದಲ್ಲಿ ಸಮುದಾಯ ಆರೋಗ್ಯ ಕಾರ್ಯಕರ್ತೆ ಹೀನಾದೇವಿ ಗ್ರಾಮಸ್ಥರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ವೃದ್ಧನ ಮಗ ಹೇಳುವ ಪ್ರಕಾರ ಗ್ರಾಮಸ್ಥರೆಲ್ಲ ಸೇರಿ ತನ್ನ ತಾಯಿಯ ಬಳಿ ಕೂಡಾ ಮೂತ್ರ ಕುಡಿಯುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಇದಕ್ಕೆ ನಾನು ತಡೆ ಒಡ್ಡಿದೆ ಎಂದು ಹೇಳಿದ್ದಾರೆ.

ಈ ಘಟನೆಯ ನಂತರ ವೃದ್ಧ ವ್ಯಕ್ತಿ ದೂರು ದಾಖಲು ಮಾಡಲು ನೇತರ್ಹತ್‌ ಪೊಲೀಸ್‌ ಠಾಣೆಗೆ ಹೋಗಿದ್ದು, ಅಲ್ಲಿ ಅವರನ್ನು ವಾಪಸ್‌ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ನಂತರ ಔಪಚಾರಿಕ ದೂರು ದಾಖಲಾಗಿದ್ದು, ತನಿಖೆ ಮಾಡಲು ಮತ್ತು ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಠಾಣೆಯ ಉಸ್ತುವಾರಿಗೆ ನಿರ್ದೇಶನ ಮಾಡಲಾಗಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ವಿಪಿನ್‌ ಕುಮಾರ್‌ ದುಬೆ ಹೇಳಿದ್ದಾರೆ.

You may also like