ಮಂಗಳೂರು: ಗ್ರಾಹಕರೊಬ್ಬರ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ವಿತ್ ಡ್ರಾ ಮಾಡಿರುವ ಕುರಿತು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಫೆ.28 ರಂದು ತನ್ನ ಮೊಬೈಲ್ನಲ್ಲಿದ್ದ ಸಿಮ್ ಕಾರ್ಡ್ ಡೆಡ್ ಆಗಿರುವುದನ್ನು ಗಮನಿಸಿ ಏರ್ಟೆಲ್ ಕಚೇರಿಗೆ ಹೋಗಿ ಅದೇ ಸಂಖ್ಯೆಯ ಸಿಮ್ ಪಡೆದಿದ್ದಾರೆ. ನಾಲ್ಕು ಗಂಟೆಯ ಬಳಿಕ ಆ ಸಿಮ್ ಅನ್ನು ಮೊಬೈಲ್ಗೆ ಹಾಕಿ ಗೂಗಲ್ ಪೇ ಆಪ್ ಆಕ್ಟಿವೇಶನ್ ಮಾಡುವಾಗ ಒಟಿಪಿ ಬಂದಿದೆ. ಆದರೆ ಆ ಒಟಿಪಿಯನ್ನು ಅವರು ಹಾಕಿಲ್ಲ.
ಅವರು ಪಂಪ್ವೆಲ್ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು, ಮಾರ್ಚ್ 2 ರಂದು ಮುಂಜಾನೆ ಹಂತ ಹಂತವಾಗಿ ವ್ಯಕ್ತಿಯ ಖಾತೆಯಿಂದ ಹಣ ಕಡಿತಗೊಂಡಿರುವ ಕುರಿತು ಮೊಬೈಲ್ಗೆ ಮೆಸೇಜ್ ಬಂದಿದೆ. ಅನಂತರ ಅವರು ಬ್ಯಾಂಕಿಗೆ ಹೋಗಿ ತಮ್ಮ ಖಾತೆಯನ್ನು ಸ್ಥಗಿತ ಮಾಡಲು ಹೇಳಿದ್ದಾರೆ.
ಫೆ.27 ರಿಂದ ಮಾರ್ಚ್ 2 ರವರೆಗೆ ಬ್ಯಾಂಕ್ ಸ್ಟೇಟ್ಮೆಂಟ್ ಪಡೆದುಕೊಂಡು ಪರಿಶೀಲನೆ ಮಾಡಿದಾಗ ಖಾತೆಯಿಂದ ಕ್ರಮವಾಗಿ 1.98 ಲಕ್ಷ ರೂ. ಅನಧಿಕೃತವಾಗಿ ವಿತ್ಡ್ರಾ ಮಾಡಿರುವುದು ತಿಳಿದು ಬಂದಿದೆ.
ಹಣ ಕಳೆದುಕೊಂಡ ವ್ಯಕ್ತಿ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

