Home » ಮಂಗಳೂರು: ಬೈಕ್‌ ಸಹಸವಾರೆ ಸಾವು: ಕಾರು ಚಾಲಕನಿಗೆ ಶಿಕ್ಷೆ

ಮಂಗಳೂರು: ಬೈಕ್‌ ಸಹಸವಾರೆ ಸಾವು: ಕಾರು ಚಾಲಕನಿಗೆ ಶಿಕ್ಷೆ

0 comments
Uttarpradesh

ಮಂಗಳೂರು: ಬೈಕ್‌ ಸಹಸವಾರೆಯ ಸಾವಿಗೆ ಕಾರಣನಾದ ಕಾರು ಚಾಲಕನಿಗೆ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪನ್ನು ನೀಡಿದೆ.

ನಗರದ ಲಾಲ್‌ಭಗ್‌ ನಿವಾಸಿ ದೀಪಕ್‌ ಆರ್‌ (57) ಶಿಕ್ಷೆಗೊಳಗಾದ ಆರೋಪಿ.

ಈ ಪ್ರಕರಣದ ಭಾಗಶಃ ತನಿಖೆಯನ್ನು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಜಗನ್ನಾಥ ಅವರು ನಡೆಸಿದ್ದು, ನಂತರ ಪೊಲೀಸ್‌ ನಿರೀಕ್ಷಕ ಜಯಾನಂದ ಕೆ.ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿ ವಾದ ವಿವಾದ ಆಲಿಸಿದ ಮಂಗಳೂರಿನ ಜೆಎಂಎಫ್‌ಸಿ 8ನೇ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್‌ ಪಿ.ಎ ಅವರು ಜ.28 ರಂದು ಆರೋಪಿಗೆ 6 ತಿಂಗಳ ಸಾದಾ ಜೈಲು ವಾಸ ಮತ್ತು 7000 ರೂ.ದಂಡ ವಿಧಿಸಿ ಆದೇಶ ನೀಡಿದ್ದಾರೆ.

banner

You may also like