Home News ಪಾಪಿಗಳ ಕ್ರೂರ ಕೃತ್ಯಕ್ಕೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರು !! ಯುವಕನನ್ನು ಬರ್ಬರವಾಗಿ ಕೊಂದು ಠಾಣೆಗೆ...

ಪಾಪಿಗಳ ಕ್ರೂರ ಕೃತ್ಯಕ್ಕೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರು !! ಯುವಕನನ್ನು ಬರ್ಬರವಾಗಿ ಕೊಂದು ಠಾಣೆಗೆ ಶವ ಹೊತ್ತು ತಂದ ಕೊಲೆಗಡುಕರು

Hindu neighbor gifts plot of land

Hindu neighbour gifts land to Muslim journalist

ಬೆಳ್ಳಂಬೆಳಗ್ಗೆ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಯುವಕನೋರ್ವನನ್ನು ಬರ್ಬರವಾಗಿ ಕೊಚ್ಚಿ ಕೊಲೆ ನಡೆಸಿದ ಪಾತಕಿಗಳು ಶವವನ್ನು ಠಾಣೆಗೆ ಹೊತ್ತುಕೊಂಡು ಬಂದಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಕೊಲೆಯಾದ ವ್ಯಕ್ತಿಯನ್ನು ಭಾಸ್ಕರ್(24) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಗಳಾದ ಆಟೋ ಚಾಲಕ ಮುನಿರಾಜು, ಐರನ್ ಅಂಗಡಿ ಮಾರುತಿ ಹಾಗೂ ಕ್ಯಾಬ್ ಡ್ರೈವರ್ ನಾಗೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಚ್ಚಿಬಿದ್ದ ಪೊಲೀಸರು
ಆರೋಪಿಗಳು ಕೊಲೆ ನಡೆಸಿದ ಬಳಿಕ ರಕ್ತಸಿಕ್ತ ದೇಹವನ್ನು ಪೊಲೀಸ್ ಠಾಣೆಗೆ ಹೊತ್ತುಕೊಂಡು ಬಂದಿದ್ದು, ಠಾಣೆಯ ಮುಂದೆ ಮೃತದೇಹ ಹೊತ್ತುಕೊಂಡು ಬರುವ ದೃಶ್ಯ ಕಂಡ ಪೊಲೀಸರು ಅರೆಕ್ಷಣ ಬೆಚ್ಚಿಬಿದ್ದರು. ಆ ಬಳಿಕ ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.