Home News ಮಂಗಳೂರಿನಿಂದ ಗುಜರಾತಿಗೆ ಹೊರಟಿದ್ದ ಅಡಿಕೆ ತುಂಬಿದ 2 ಲಾರಿಗಳು ನಾಪತ್ತೆ

ಮಂಗಳೂರಿನಿಂದ ಗುಜರಾತಿಗೆ ಹೊರಟಿದ್ದ ಅಡಿಕೆ ತುಂಬಿದ 2 ಲಾರಿಗಳು ನಾಪತ್ತೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಮಂಗಳೂರಿನಿಂದ ಅಡಿಕೆ ಚೀಲಗಳನ್ನು ತುಂಬಿಸಿಕೊಂಡು ಗುಜರಾತ್‌ಗೆ ಹೊರಟಿದ್ದ ಎರಡು ಹಾರಿಗಳು ನಾಪತ್ತೆಯಾಗಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂದರ್‌ನ ಟ್ರಾನ್ಸ್‌ಪೋರ್ಟ್ ಕಚೇರಿಯೊಂದರ ಮ್ಯಾನೇಜರ್ ಜು. 19ರಂದು ಎರಡು ಲಾರಿಗಳನ್ನು ಬಾಡಿಗೆಗೆ ಪಡೆದು ಒಂದು ಲಾರಿಯಲ್ಲಿ 291 ಚೀಲ ಅಡಿಕೆ ತುಂಬಿಸಿ ಬಂದರಿನಿಂದ ರಾಜ್‌ಕೋಟ್‌ನಲ್ಲಿರುವ ಬ್ರಾಂಚ್‌ಗೆ ಕಳುಹಿಸಿಕೊಟ್ಟಿದ್ದರು.

ಇನ್ನೊಂದು ಲಾರಿಯಲ್ಲಿ 301 ಚೀಲ ಅಡಿಕೆಯನ್ನು ತುಂಬಿಸಿ ಜು. 20ರಂದು ಗುಜರಾತ್‌ಗೆ ಕಳುಹಿಸಿಕೊಟ್ಟಿದ್ದರು. ಎರಡೂ ಲಾರಿಗಳು ಜು. 24ರಂದು ಗುಜರಾತ್‌ನ ಬ್ರಾಂಚ್‌ಗೆ ತಲುಪಬೇಕಿತ್ತು. ಆದರೆ ಇನ್ನೂ ತಲುಪಿಸದೆ ವಂಚನೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.