ಕಡಬ ದೇರಾಜೆ | ಸ್ಪೋಟಕ ಸಿಡಿದು ಮುಖ ಛಿದ್ರಗೊಂಡ ಹಸುವಿಗೆ ದಯಾಮರಣ !

Share the Article

ಕಡಬ ತಾಲೂಕಿನ ದೇರಾಜೆ ಸಂಪಡ್ಕದಲ್ಲಿ ಆಹಾರ ಹುಡುಕುತ್ತಾ ಬಂದ ಹಸುವೊಂದು ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಇಟ್ಟು ಹೋಗಿದ್ದ ತೋಟೆಗೆ ಬಾಯಿಹಾಕಿ ಸ್ಫೋಟಗೊಂಡು ಅದರ ತೀವ್ರತೆಗೆ ಹಸುವಿನ ಮುಖ ಛಿದ್ರ ವಾಗಿ ಕೆಳದವಡೆ ನೇತಾಡುತ್ತಿತ್ತು.

ಹಸು ತಾನು ಮಾಡದ ತಪ್ಪಿಗೆ ಎಲ್ಲಾ ನೋವು ತಿಂದುಕೊಂಡು ಕಣ್ಣೀರು ಕೆಡವಿಕೊಂಡಿತ್ತು. ಹಸುವನ್ನು ಪರಿಶೀಲಿಸಿದ ಪಶು ವೈದ್ಯರು ಹಸುವನ್ನು ಚಿಕಿತ್ಸೆ ಮೂಲಕ ಸರಿಪಡಿಸುವುದು ಅಸಾಧ್ಯ ಎಂಬ ಮಾಹಿತಿ ನೀಡಿದರು.

ಬಳಿಕ ಮನೆಯವರೊಂದಿಗೆ ಮಾತನಾಡಿ, ಪೊಲೀಸರ ಸಮ್ಮುಖದಲ್ಲಿ, ಪಶು ವೈದ್ಯರ ಸಹಾಯದಿಂದ ಹಸುವಿಗೆ ದಯಾಮರಣ ನೀಡಲಾಯಿತು.

ದೇರಾಜೆ ಸಂಪಡ್ಕ ನಿವಾಸಿ ಬಾಲಚಂದ್ರ ಅವರಿಗೆ ಸೇರಿದ ಈ ಹಸು, ದುಷ್ಟರ ಕೃತ್ಯಕ್ಕೆ ಅನ್ಯಾಯವಾಗಿ ಪ್ರಾಣ ತೆರುವಂತಾಗಿದೆ. ಹಸುವಿನ ನೋವು ನೋಡಿ ಕಣ್ಣೀರು ಹಾಕುತ್ತಿದ್ದ ಮನೆಯವರು ಮತ್ತು ಪಕ್ಕದ ಮನೆಯವರು ನಿಟ್ಟುಸಿರಿಟ್ಟಿದ್ದಾರೆ.

Leave A Reply

Your email address will not be published.