ರಾಜ್ಯದ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು `ಪ್ರಜಾ ಸೇವೆ’ (Praja Seve) ಎನ್ನುವ ಹೊಸ ಇಲಾಖೆ ಸ್ಥಾಪನೆ ಮಾಡಲಾಗಿದೆ. ಇದಕ್ಕೆ ಪ್ರತ್ಯೇಕ ಮಂತ್ರಿಯನ್ನ ಸಹ ನೇಮಕ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.


ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಷಯ ತಿಳಿಸಿದ್ದಾರೆ. ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ, ಸಾರ್ವಜನಿಕರ ಅಹವಾಲು, ಸಮಸ್ಯೆಗಳಿಗೆ ಸ್ಪಂದಿಸಲು, ಅವರಿಗೆ ನ್ಯಾಯ ಒದಗಿಸಲು, ಅಧಿಕಾರಿಗಳ ತಪ್ಪನ್ನು ತಿದ್ದಲು ಈ ಹೊಸ ಸಚಿವಾಲಯ ಮಾಡುತ್ತಿದ್ದು, ಅದಕ್ಕೆ ಪ್ರತ್ಯೇಕ ಸಚಿವರನ್ನು ನಿಯೋಜಿಸುತ್ತೇವೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು 224 ಕ್ಷೇತ್ರಗಳಿಗೂ ಹೋಗಿ ಸಭೆಗಳನ್ನ ನಡೆಸಬೇಕು. ವಾರಕ್ಕೆ ಒಂದು ಕಡ್ಡಾಯ ವಾಗಿ, ಶಾಸಕರ ಜೊತೆಗೂಡಿ ಹೋಗಿ ಜನಸ್ಪಂದನಾ ಸಭೆ ಮಾಡಬೇಕು. ಅಲ್ಲಿಂದ ತಂದು ಅರ್ಜಿಗಳನ್ನ ತಂದು ರಿವ್ಯೂ ಮಾಡಿ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದಾರೆ.
ಪ್ರಜಾ ಸೇವೆ ಇಲಾಖೆಯ ಉದ್ದೇಶಗಳು
ತ್ವರಿತ ಸ್ಪಂದನೆ: ರಾಜ್ಯದ ಜನರ ದೂರುಗಳು ಮತ್ತು ಕುಂದುಕೊರತೆಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸುವುದು.
ಸಾರ್ವಜನಿಕ ಸ್ನೇಹಿ ಆಡಳಿತ: ಆಡಳಿತ ವ್ಯವಸ್ಥೆಯನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುವುದು.
ನೇರ ಸಂಪರ್ಕ: ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ವ್ಯವಸ್ಥೆ ಮತ್ತು ಅಧಿಕಾರಿಗಳ ನಿಯೋಜನೆ

