Home » ಬೆಳ್ತಂಗಡಿ | ಭೂ ಕಬಳಿಕೆ: ಸುಳ್ಳು ಮಾಹಿತಿ ನೀಡಿ ಹಕ್ಕುಪತ್ರ; ರದ್ದುಪಡಿಸಿದ ತಹಶೀಲ್ದಾರ್

ಬೆಳ್ತಂಗಡಿ | ಭೂ ಕಬಳಿಕೆ: ಸುಳ್ಳು ಮಾಹಿತಿ ನೀಡಿ ಹಕ್ಕುಪತ್ರ; ರದ್ದುಪಡಿಸಿದ ತಹಶೀಲ್ದಾರ್

0 comments

ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಗ್ರಾಮದ ಸರ್ವೆ ನಂಬರ್ 272ರಲ್ಲಿ ನಡೆದಿದೆ ಎನ್ನಲಾದ ಸರ್ಕಾರಿ ಭೂಮಿ ಅತಿಕ್ರಮಣ ಪ್ರಕರಣವೊಂದು ಇದೀಗ ಆಡಳಿತಾತ್ಮಕವಾಗಿ ಹೊಸ ತಿರುವು ಪಡೆದಿದೆ.

ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಅನ್ನಪೂರ್ಣ ಕೊಂಕಣಿ ಎಂಬವರ ವಿರುದ್ಧ ದೂರು ದಾಖಲಾಗಿದ್ದು, ಸುಳ್ಳು ಮಾಹಿತಿ ನೀಡಿ ಹಕ್ಕುಪತ್ರ ಪಡೆದಿರುವುದು ತನಿಖೆಯಲ್ಲಿ ಸಾಬೀತಾಗಿದೆ. ​ಹಕ್ಕುಪತ್ರದ ಷರತ್ತುಗಳನ್ನು ಉಲ್ಲಂಘಿಸಿ ಭೂಮಿ ಕಬಳಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಬೆಳ್ತಂಗಡಿ ತಹಶೀಲ್ದಾರ್ ನ್ಯಾಯಾಲಯವು ಈ ಹಿಂದೆಯೇ ಮಂಜೂರಾತಿಯನ್ನು ರದ್ದುಪಡಿಸಿ ಕೂಡಲೇ ತೆರವುಗೊಳಿಸುವಂತೆ ಆದೇಶಿಸಿತ್ತು.

 

ಈ ಆದೇಶವನ್ನು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯವೂ ಎತ್ತಿಹಿಡಿದಿತ್ತು. ಆದರೆ, ಅತಿಕ್ರಮಣದಾರರಾದ ಅನ್ನಪೂರ್ಣ ಕೊಂಕಣಿ ಮತ್ತವರ ಭೂಕಬಳಿಕೆ ತಂಡ ಹಳೆಯ ಆದೇಶಗಳನ್ನು ಮರೆಮಾಚಿ, ಐದು ವರ್ಷಗಳ ಬಳಿಕ ಪುನಃ ಸಹಾಯಕ ಆಯುಕ್ತರಲ್ಲಿ ಹಕ್ಕುಪತ್ರಕ್ಕಾಗಿ ವಿನಂತಿಸಿ ಮರುಪರಿಶೀಲನೆಗೆ (Remand) ಅನುಮತಿ ಪಡೆದಿದ್ದರು.

banner

​ಪ್ರಕರಣವನ್ನು ಎರಡನೇ ಬಾರಿಗೆ ಕೈಗೆತ್ತಿಕೊಂಡ ಬೆಳ್ತಂಗಡಿ ತಹಶೀಲ್ದಾರ್, ಅರ್ಜಿದಾರರು ಮಾಹಿತಿ ಮರೆಮಾಚಿ ಅಡ್ಡದಾರಿ ಹಿಡಿದಿರುವುದನ್ನು ಪತ್ತೆಹಚ್ಚಿ, ಮೊದಲಿನ ರದ್ದತಿ ಆದೇಶವನ್ನೇ ಯಥಾವತ್ತಾಗಿ ಕಾಯ್ದಿರಿಸಿದ್ದಾರೆ.

ಅಲ್ಲದೆ, ಅರ್ಜಿದಾರರಿಗೆ ಆಕ್ಷೇಪವಿದ್ದಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಕಡಿತಗೊಳಿಸಿ ಆದೇಶ ನೀಡಿದ್ದಾರೆ.

You may also like