ಪುಣೆ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಕುರಿತಂತೆ ಪೇಪರ್ ಸೆಟ್ಟಿಂಗ್ ಸಮಿತಿಯ ಎರಡನೇ ಸದಸ್ಯೆಯನ್ನು ಸಿಬಿಐ ಬಂಧಿಸಿದ್ದಾರೆ.


ಪುಣೆಯ ಹಿರಿಯ ಸಸ್ಯಶಾಸ್ತ್ರ ಶಿಕ್ಷಕಿಯನ್ನು ಬಂಧಿಸಲಾಗಿದೆ. ಏಪ್ರಿಲ್ನಲ್ಲಿ ತಮ್ಮ ಮನೆಯಲ್ಲಿ ನಡೆಸುತ್ತಿದ್ದ ಕೋಚಿಂಗ್ ಕ್ಲಾಸ್ಗಳಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದ ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದಾರೆ. ಇವರು ನೀಡಿದ್ದ ಪ್ರಶ್ನೆಗಳು NEET-UG ನೈಜ ಪರೀಕ್ಷಾ ಪತ್ರಿಕೆಯೊಂದಿಗೆ ಸಂಪೂರ್ಣ ಹೊಂದಾಣಿಕೆಯಾಗಿವೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಸಂಪೂರ್ಣ ಸಮಿತಿ ಮತ್ತು ಎನ್ಟಿಎಯ ಇತರ ಹಿರಿಯ ಅಧಿಕಾರಿಗಳು ಈಗ ತನಿಖೆಯ ವ್ಯಾಪ್ತಿಯಲ್ಲಿದ್ದಾರೆ.
ಬಂಧನಕ್ಕೊಳಗಾದ ಮನೀಶಾ ಗುರುನಾಥ್ ಮಾಂಢರೆ, ಇದಕ್ಕೂ ಮುನ್ನ ಬಂಧನಕ್ಕೊಳಗಾಗಿದ್ದ ನಿವೃತ್ತ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಅವರದ್ದೇ ಕಾರ್ಯವಿಧಾನವನ್ನು ಬಳಸಿದ್ದಾಳೆ ಎಂದು ಸಿಬಿಐ ವಿವರ ನೀಡಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಪರೀಕ್ಷಾ ಪ್ರಕ್ರಿಯೆಗೆ ವಿಷಯ ತಜ್ಞರಾಗಿ ನೇಮಕಗೊಂಡಿದ್ದ ಮಾಂಧರೆ, ರಸಾಯನಶಾಸ್ತ್ರ ಪ್ರಾಧ್ಯಾಪಕ ಪಿ.ವಿ. ಕುಲಕರ್ಣಿ ನಂತರ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಪುಣೆಯ ಎರಡನೇ ಶಿಕ್ಷಕಿ.
ತನಿಖಾಧಿಕಾರಿಗಳ ಪ್ರಕಾರ, ಅವರು ಜೀವಶಾಸ್ತ್ರ ಪ್ರಶ್ನೆ ಪತ್ರಿಕೆಗೆ ಸಂಪೂರ್ಣ ಪ್ರವೇಶವನ್ನು ಹೊಂದಿದ್ದರು ಮತ್ತು ಪರೀಕ್ಷೆಗೆ ಮೊದಲು ಆಯ್ದ ಅಭ್ಯರ್ಥಿಗಳೊಂದಿಗೆ ಗೌಪ್ಯ ಪರೀಕ್ಷೆಯ ವಿಷಯವನ್ನು ಹಂಚಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

