Home » ದರ್ಶನ್ ಬದಲು ಪವಿತ್ರ ಗೌಡಗೆ ಮೊದಲು ಜಾಮೀನು?

ದರ್ಶನ್ ಬದಲು ಪವಿತ್ರ ಗೌಡಗೆ ಮೊದಲು ಜಾಮೀನು?

0 comments

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಪ್ರಮುಖ ಆರೋಪಿ ನಟ ದರ್ಶನ್ ಸುಪ್ರೀಂ ಕೋರ್ಟಿಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇದೀಗ ಅವರಿಗೆ  ಭಾರೀ ಹಿನ್ನಡೆಯಾಗಿದೆ. ಅಲ್ಲದೆ ಇನ್ನು ಒಂದು ವರ್ಷ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯವಾಗಿದೆ

ಯಸ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ಆಗಿರುವ ನಟ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದ್ದು, ಇದೀಗ ಸುಪ್ರೀಂ ಕೋರ್ಟಲ್ಲಿ ನಟ ದರ್ಶನ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರಕರಣ ಸಂಬಂಧ ಉಳಿದ ಪ್ರಮುಖ ಆರೋಪಿಗಳ ವಿಚಾರಣೆಗೆ ಒಂದು ವರ್ಷ ಸಮಯ ನೀಡಿದ್ದು ಹಾಗಾಗಿ ನಟ ದರ್ಶನ್ ಇನ್ನೂ ಒಂದು ವರ್ಷ ಜೈಲಲ್ಲಿ ಕಾಲ ಕಳೆಯ ಬೇಕಾಗಿದೆ. ಆದರೆ ದರ್ಶನ್ ಬದಲು, ತ್ವರಿತವಾಗಿ ಪವಿತ್ರ ಗೌಡಗೆ ಜಾಮೀನು ದೊರೆಯುವ ಸಾಧ್ಯತೆ ಇದೆ ಎಂದು ವಕೀಲರು ಹೇಳಿದ್ದಾರೆ.

ಪವಿತ್ರಾ ಗೌಡ ಅವರಿಗೆ ಜಾಮೀನು ಸಿಗಬಹುದು

ಈ ತೀರ್ಪಿನ ಬೆನ್ನಲ್ಲೇ ಪ್ರಕರಣದ ಕಾನೂನು ಆಯಾಮಗಳನ್ನು ವಿಶ್ಲೇಷಿಸಿರುವ ಹಿರಿಯ ವಕೀಲ ಬಾಲನ್ ಅವರು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ. ನಟ ದರ್ಶನ್ ಅವರಿಗಿಂತಲೂ ಪವಿತ್ರಾ ಗೌಡ ಅವರಿಗೆ ಕಾನೂನುಬದ್ಧವಾಗಿ ಜಾಮೀನು ದೊರೆಯುವ ಅವಕಾಶಗಳು ಹೆಚ್ಚಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಪವಿತ್ರಾ ಗೌಡ ಅವರು ಒಬ್ಬ ಮಹಿಳೆ ಮತ್ತು ಮಗಳ ಜವಾಬ್ದಾರಿಯಿರುವ ಸಿಂಗಲ್ ಪೇರೆಂಟ್ ಆಗಿರುವುದರಿಂದ, ಈ ಆಧಾರದ ಮೇಲೆ ಅವರು ಜಾಮೀನಿಗಾಗಿ ಮನವಿ ಮಾಡಿದರೆ ನ್ಯಾಯಾಲಯವು ಅದನ್ನು ಪುರಸ್ಕರಿಸುವ ಸಾಧ್ಯತೆ ಇದೆ” ಎಂದು ಅವರು ವಿವರಿಸಿದ್ದಾರೆ.

banner

You may also like