ತಮಿಳುನಾಡಿನಲ್ಲಿ ನಟ ವಿಜಯ್ ದಳಪತಿ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಇದುವರೆಗೂ ಸರ್ಕಾರ ರಚಿಸಲು ಕಾನೂನು ಹೋರಾಟ ಮಾಡುತ್ತಿದ್ದ ದಳಪತಿಗೆ ನಿನ್ನೆ ರಾತ್ರಿ ರಾಜ್ಯಪಾಲರು ಸರ್ಕಾರ ರಚಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಇಂದು ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಶುಕ್ರವಾರ ತಡ ರಾತ್ರಿ ವಿಜಯ್ ದಳಪತಿ ಸಿಎಂ ಆಗೋ ಕನಸು ಭಗ್ನವಾಗಿದೆ. ಹಾಗಿದ್ರೆ ಮತ್ತೆ ವಿಜಯ್ ಗೆ ದ್ರೋಹ ಮಾಡಿದ್ಯಾರು?


ಹೌದು, ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ವಿಜಯ್ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದ್ದರು. ಎಲ್ಲವೂ ಅಂದುಕೊಂಡ ಆಗಿದ್ದಾರೆ ವಿಜಯ್ ಇಂದು ತಮಿಳುನಾಡಿನ ಮುಖ್ಯಮಂತ್ರಿ ಆಗುತ್ತಿದ್ದರು. ಆದರೆ ತಮಿಳುನಾಡು ರಾಜಕೀಯ ಮತ್ತೊಂದು ತಿರುವು ಪಡೆದುಕೊಂಡಿದೆ. 234 ಸದಸ್ಯರ ವಿಧಾನಸಭೆಯಲ್ಲಿ ಪಕ್ಷವು ಬಹುಮತವನ್ನು ಪಡೆಯಲು ವಿಫಲವಾದ ಕಾರಣ, ಟಿವಿಕೆ ಸಂಸ್ಥಾಪಕ ವಿಜಯ್ ಶನಿವಾರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಭರವಸೆಗಳು ಶುಕ್ರವಾರ ತಡರಾತ್ರಿ ಭಗ್ನಗೊಂಡಿವೆ.
ನಟ ವಿಜಯ್ ಅವರ ಪಕ್ಷವಾದ ಟಿವಿಕೆ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿತು, ಆದರೆ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಆದ್ರೂ ದಳಪತಿ ವಿಜಯ್ ಶುಕ್ರವಾರ ಮೂರನೇ ಬಾರಿಗೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ವಿಜಯ್ ಸಂಖ್ಯಾಬಲವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಸರ್ಕಾರ ರಚಿಸಲು ಅವರಿಗೆ ರಾಜ್ಯಪಾಲರಿಂದ ಆಹ್ವಾನ ಬಂದಿದೆ ಎಂಬ ಸುದ್ದಿಯೂ ಹರಡಿತು. ಆದಾಗ್ಯೂ, ಸ್ವಲ್ಪ ಸಮಯದ ನಂತರ ವಿಜಯ್ ಇನ್ನೂ ಸಂಖ್ಯಾಬಲವನ್ನು ಪಡೆದುಕೊಂಡಿಲ್ಲ ಎಂದು ದೃಢಪಡಿಸಲಾಯಿತು.
ಯಸ್, ಐದು ಕಾಂಗ್ರೆಸ್ ಶಾಸಕರು ಮತ್ತು ಸಿಪಿಐ ಮತ್ತು ಸಿಪಿಐ(ಎಂ) ನಿಂದ ತಲಾ ಇಬ್ಬರು ಶಾಸಕರು ಡಿಎಂಕೆ ಮೈತ್ರಿಕೂಟದಿಂದ ಹೊರಬಂದು ವಿಜಯ್ಗೆ ಬೆಂಬಲ ಘೋಷಿಸಿದ್ದರು. ವಿಸಿಕೆ 2 ಶಾಸಕರನ್ನು ಹೊಂದಿದ್ದು, ಅದು ಕೂಡ ಟಿವಿಕೆಗೆ ಬೆಂಬಲ ನೀಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿತ್ತು. ಆದರೆ ರಾಜಕೀಯ ಪರಿಸ್ಥಿತಿ ಇದ್ದಕ್ಕಿದ್ದಂತೆ ರಾತ್ರೋರಾತ್ರಿ ಬದಲಾಗಿಬಿಟ್ಟಿತು. ಡಿಎಂಕೆಯ ಮಿತ್ರ ಪಕ್ಷ ಹಾಗೂ ಇಬ್ಬರು ಶಾಸಕರನ್ನು ಹೊಂದಿರುವ ಐಯುಎಂಎಲ್, ವಿಜಯ್ ಅವರನ್ನು ಬೆಂಬಲಿಸಲು ನಿರಾಕರಿಸಿತು. ಅಲ್ಲದೆ ಡಿಎಂಕೆ ಮೈತ್ರಿಕೂಟಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ಏತನ್ಮಧ್ಯೆ, ವಿಸಿಕೆ ಕೂಡ ಕೊನೆಯ ಕ್ಷಣದಲ್ಲಿ ದಳಪತಿ ವಿಜಯ್ ಅವರನ್ನು ವಂಚಿಸಿತು. ಅದು ತನ್ನ ನಿರ್ಧಾರವನ್ನು ಮುಂದೂಡಿತು ಮತ್ತು ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದೆ.
ಇದರ ಪರಿಣಾಮವಾಗಿ, ಇಂದು ದಳಪತಿ ವಿಜಯ್ ಪ್ರಮಾಣವಚನ ಸ್ವೀಕಾರದ ಸಾಧ್ಯತೆಗಳು ಕಡಿಮೆಯಾಗಿವೆ. ಯಾವುದೇ ಪಕ್ಷವು ತನಗೆ ಬಹುಮತವನ್ನು ತೋರಿಸದ ಹೊರತು ಸರ್ಕಾರ ರಚಿಸಲು ಯಾರನ್ನೂ ಆಹ್ವಾನಿಸುವುದಿಲ್ಲ ಎಂದು ರಾಜ್ಯಪಾಲರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ವಿಜಯ್ ಸಿಎಂ ಆಗುವ ಕನಸು ಮತ್ತೆ ಭಗ್ನವಾಗುವ ಸಾಧ್ಯತೆ ಇದೆ.

