ಬಂಟ್ವಾಳ; ಬಾರ್ನಲ್ಲಿ ಮದ್ಯ ಸೇವನೆ ಮಾಡಿ ಹಣ ನೀಡದೆ ಗಲಾಟೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅಮ್ಮೆಮಾರ್ ನಿವಾಸಿ ಅಬ್ದುಲ್ ರಹಿಮಾನ್@ ಮುನ್ನಿ ಎಂಬಾತನು ಫರಂಗಿಪೇಟೆಯಲ್ಲಿರುವ ಬಾರ್ಗೆ ಬಂದು ಮದ್ಯ ಸೇವನೆ ಮಾಡಿದ ಬಳಿಕ 1560 ರೂ ಗಳ ಬಿಲ್ ಕೊಟ್ಟಾಗ ಹಣ ಕೊಡುವುದಿಲ್ಲ ಎಂದು ಹೇಳಿ ಗಲಾಟೆ ಮಾಡಿರುವುದಾಗಿ ವರದಿಯಾಗಿದೆ.
ಬಾರ್ನ ಸಿಬಂದಿ ವಾಸವಿರುವ ರೂ ಬಳಿಗೆ ತೆರಳಿ ಬೆದರಿಕೆ ಹಾಕಿದ್ದನು. ರಾತ್ರಿ ಮತ್ತೆ ಬಾರ್ಗೆ ಆಗಮಿಸಿ ಹಲ್ಲೆ ಮಾಡಿ, ಬೆದರಿಕೆ ಒಡ್ಡಿ, ಕಂಪ್ಯೂಟರ್ಗೆ ಹಾನಿ ಮಾಡಿದ್ದಾನೆ ಎಂದು ಗುರುಪ್ರಸಾದ್ ಎಂ.ಆರ್. ದೂರು ನೀಡಿದ್ದಾರೆ.
