ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ನಿರೀಕ್ಷಿಸದ ಮಟ್ಟದಲ್ಲಿ ದಳಪತಿ ವಿಜಯ್ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿದೆ. ಇದೀಗ ಸರ್ಕಾರ ರಚನೆಗೆ ಹಕ್ಕು ಮಂಡನೆಯನ್ನು ಕೂಡ ಪಕ್ಷ ಮಾಡಿದೆ. ಆದರೆ ಸದ್ಯದಲ್ಲೇ ನಟಿ ತ್ರಿಶಾ ಕೃಷ್ಣನ್ ಕೂಡ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೇರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಲ್ಲದೆ ಸದ್ಯದಲ್ಲೇ ನಡೆಯುವ ಉಪಚುನಾವಣೆಯಲ್ಲಿ ಅವರು ತಿರುಚಿರಾಪಳ್ಳಿಯಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.


ಯಸ್, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಚೆನ್ನೈನ ಪೆರಂಬೂರು ಮತ್ತು ಪೂರ್ವ ತಿರುಚಿರಾಪಳ್ಳಿ ಅಂದರೆ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಕಾನೂನಿನ ಪ್ರಕಾರ, ಅವರು ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಅವರು 14 ದಿನಗಳಲ್ಲಿ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದರ ನಂತರ, ಅವರು ಖಾಲಿ ಮಾಡುವ ಸ್ಥಾನಕ್ಕೆ ಉಪಚುನಾವಣೆ ಘೋಷಿಸಲಾಗುತ್ತದೆ. ಒಂದ್ವೇಳೆ ವಿಜಯ್ ತಿರುಚ್ಚಿರಾಪಳ್ಳಿ ಈಸ್ಟ್ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟರೆ.. ಅದೇ ಜಾಗಕ್ಕೆ ತ್ರಿಷಾ ಬರ್ತಾರಾ? ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆಯುತ್ತಾರಾ? ಸಿಎಂ ವಿಜಯ್ ಸಂಪುಟದಲ್ಲಿ ಸಚಿವೆ ಆಗ್ತಾರಾ? ಎಂಬ ಚರ್ಚೆಯಂತೂ ನಡೆಯುತ್ತಿದೆ.
ಇನ್ನೂ ವರದಿಯಾಗಿರುವಂತೆ, ವಿಜಯ್ ಮತ್ತು ಟಿವಿಕೆ ನಾಯಕರು ಈಗ ತ್ರಿಶಾ ಕೃಷ್ಣನ್ ಅವರನ್ನು ತಿರುಚಿರಾಪಳ್ಳಿ ಸ್ಥಾನದಿಂದ ಸ್ಪರ್ಧಿಸುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ತ್ರಿಷಾಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಕಾರಣ, ಅವರು ರಾಜಕೀಯ ಪ್ರವೇಶಿಸಲು ಹೆಚ್ಚು ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ.
ಸಿಎಂ ಆಗಬೇಕು ಎಂದಿದ್ದ ತ್ರಿಷಾ!
‘’ನಾನು ತಮಿಳುನಾಡಿನ ಮುಖ್ಯಮಂತ್ರಿ ಆಗಬೇಕು’’ ಎಂದು ಬಹಳ ವರ್ಷಗಳ ಹಿಂದೆ ನಟಿ ತ್ರಿಷಾ ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದರು. ‘ಬೇಕಾದರೆ 10 ವರ್ಷಗಳ ನಂತರ ನೋಡಿ’ ಅಂತಲೂ ಹೇಳಿದ್ದರು. ಸದ್ಯದ ಪರಿಸ್ಥಿತಿ ನೋಡಿದರೆ.. ತ್ರಿಷಾ ರಾಜಕೀಯಕ್ಕೆ ಧುಮುಕಿದರೂ ಅಚ್ಚರಿ ಇಲ್ಲ.

