Home » Chetan Ahimsa: ನಟ ರಾಜಕುಮಾರ್ ಸಮಾಧಿ ಸ್ಥಳದ ಬಗ್ಗೆ ಚೇತನ್ ಅಹಿಂಸ ಕೊಂಕು – ಅಭಿಮಾನಿಗಳ ಆಕ್ರೋಶ!!

Chetan Ahimsa: ನಟ ರಾಜಕುಮಾರ್ ಸಮಾಧಿ ಸ್ಥಳದ ಬಗ್ಗೆ ಚೇತನ್ ಅಹಿಂಸ ಕೊಂಕು – ಅಭಿಮಾನಿಗಳ ಆಕ್ರೋಶ!!

0 comments

Chetan Ahimsa : ಕೆಲವು ನಟ ನಟಿಯರು ತಮ್ಮ ನಟನೆ ಮುಖಾಂತರ, ವಿಭಿನ್ನವಾದ, ವಿಶಿಷ್ಟವಾದ ಪ್ರತಿಭೆಗಳ ಮುಖಾಂತರ ತಮ್ಮನ್ನು ತಾವು ಗುರುತಿಸಿಕೊಂಡರೆ ಇತ್ತೀಚಿನ ದಿನಗಳಲ್ಲಿ ಕೆಲವು ನಟ ನಟಿಯರು ತಾವು ಫೇಮಸ್ ಆಗಲು ಬೇರೆಯೇ ಮಾರ್ಗಗಳನ್ನು ಇಟ್ಟುಕೊಂಡಿರುತ್ತಾರೆ. ಬಹುಶಃ ಅದರಲ್ಲಿ ಚೇತನ್ ಅಹಿಂಸ ಕೂಡ ಒಬ್ಬರು ಅನಿಸುತ್ತದೆ. ಯಾಕೆಂದರೆ ಯಾವುದೇ ಸಂದರ್ಭವಿರಲಿ, ಯಾವುದೇ ವಿಚಾರ ಬರಲಿ ಅದಕ್ಕೆ ಯಾವುದಾದರೂ ವಿಷಯವನ್ನು ಲಿಂಕ್ ಮಾಡಿ ಕೊಂಕು ತೆಗೆಯುವುದೇ ಅವರ ಕೆಲಸವಾಗಿಬಿಟ್ಟಿದೆ. ಈ ಮೂಲಕವಾದರೂ ತಾನು ಸುದ್ದಿಯಲ್ಲಿರುತ್ತೇನೆ ಎಂಬ ಭ್ರಮೆ ಅವರದಿರಬಹುದು. ಇದೀಗ ಇಷ್ಟು ದಿನಗಳ ಕಾಲ ತಣ್ಣಗಿದ್ದ ಚೇತನ್, ಯಾವ ವಿಚಾರವೂ ಸಿಗಲಿಲ್ಲವೆಂದೋ ಏನೋ ರಾಜ್ ಕುಮಾರ್ ಸಮಾಧಿಯ ವಿಚಾರಕ್ಕೂ ಕೈ ಹಾಕಿಬಿಟ್ಟಿದ್ದಾರೆ

ನಿನ್ನೆ ತಾನೆ ಕನ್ನಡದ ಅಭಿನಯ ಚಕ್ರವರ್ತಿ, ಕಲಾ ಸಾಮ್ರಾಟ ಭಾರತವೇ ಕೊಂಡಾಡಿರುವ ವರನಟ ಡಾಕ್ಟರ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿ ದೇವರುಗಳು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ. ಇದೆಲ್ಲದರ ನಡುವೆ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ನಟ ಚೇತನ್ ಅಹಿಂಸಾ ಅವರು ರಾಜಕುಮಾರ್ ಸಮಾಧಿ ಸ್ಥಳದ ಬಗ್ಗೆ ಕೊಂಕು ತೆಗೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಚೇತನ್ ಅಹಿಂಸ, ಅಣ್ಣಾವ್ರ ಸಮಾಧಿ ಸ್ಥಳಕ್ಕೆ ಜಾಗ ಕೊಟ್ಟಿರುವ ಸರ್ಕಾರದ ಕ್ರಮವನ್ನು ಟೀಕೆ ಮಾಡಿದ್ದಾರೆ. ‘ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ ‘ಸಮಾಧಿ ಕಾಂಪ್ಲೆಕ್ಸ್’ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು. ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ’ ಎಂದಿದ್ದಾರೆ.

ಚೇತನ್ ಅವರ ಈ ಮಾತುಗಳಿಗೆ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಯಾವುದೋ ಅಮಲಿನಲ್ಲಿ ಈ ವ್ಯಕ್ತಿ ಪೋಸ್ಟ್​​ ಹಂಚಿಕೊಂಡಿದ್ದಾರೆ’ ಎಂದು ಒಬ್ಬರು ಟೀಕೆ ಮಾಡಿದರೆ. ಇನ್ನು ಕೆಲವರು ರಾಜ್​ಕುಮಾರ್ ಅವರು ಕನ್ನಡ ಭಾಷೆಗೆ, ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಚೇತನ್ ಅಹಿಂಸಗೆ ನೆನಪು ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನು ಕೆಲವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇನ್ನಿತರರ ಸಮಾಧಿ ಸ್ಥಳಗಳ ಉಲ್ಲೇಖವನ್ನು ಮಾಡಿದ್ದಾರೆ.

banner

You may also like