Home » ಮಂಗಳೂರು: ಆಟ ಆಡುವಾಗ ಕ್ರಿಕೆಟ್‌ ಚೆಂಡು ಹೆಕ್ಕಲು ಹೋಗಿ ವಿದ್ಯುತ್‌ ಶಾಕ್‌, ಬಾಲಕ ಸಾವು

ಮಂಗಳೂರು: ಆಟ ಆಡುವಾಗ ಕ್ರಿಕೆಟ್‌ ಚೆಂಡು ಹೆಕ್ಕಲು ಹೋಗಿ ವಿದ್ಯುತ್‌ ಶಾಕ್‌, ಬಾಲಕ ಸಾವು

0 comments

ಮಂಗಳೂರು, ಎ.15: ನಗರದ ಮಹಾಕಾಳಿಪಡ್ಪು ಬಳಿ ಸ್ನೇಹಿತರ ಜೊತೆ ಕ್ರಿಕೆಟ್‌ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್‌ ತಂತಿ ತಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದ ಪ್ರಸ್ತುತ ಮಹಾಕಾಳಿಪಡ್ಪುವಿನ ನಿರ್ಮನ ನಗರದಲ್ಲಿ ವಾಸವಾಗಿರುವ ವರುಣ್‌ (15) ಮೃತಪಟ್ಟ ಬಾಲಕ.

ಮಹಾಕಾಳಿಪಡ್ಲು ಅಂಡರ್‌ಪಾಸ್‌ ಬಳಿಯ ಭಜನಾ ಮಂದಿರದ ಹತ್ತಿರ ವರುಣ್‌ ತನ್ನ ಸ್ನೇಹಿತರ ಜೊತೆ ಕ್ರಿಕೆಟ್‌ ಆಡುತ್ತಿದ್ದ. ಆಟದ ಸಂದರ್ಭ ಚೆಂಡು ಮಂದಿರದ ಛಾವಣಿಯ ಮೇಲೆ ಬಿದ್ದಿತ್ತು. ಚೆಂಡನ್ನು ಹೆಕ್ಕಲೆಂದು ಛಾವಣಿ ಏರಿದಾಗ ಆಕಸ್ಮಿಕವಾಗಿ ಮೇಲಿದ್ದ ವಿದ್ಯುತ್‌ ತಂತಿ ವರುಣ್‌ಗೆ ತಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಅಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವರುಣ್‌ ತಂದೆ ಕಣ್ಣನ ಗೌಡ ಅವರು ಕಳೆದ 25 ವರ್ಷದಿಂದ ಮಂಗಳೂರಿನಲ್ಲಿ ಸಣ್ಣ ಕ್ಯಾಂಟೀನ್‌ ನಡೆಸುತ್ತಾ ಜೀವನ ಸಾಗಿಸುತ್ತಿದ್ದು, ವರುಣ್‌ ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದ.

banner

You may also like