ಬೆಳ್ತಂಗಡಿ :ನ್ಯೂಸ್ 18 ಕನ್ನಡ ಚಾನೆಲ್ ಅರ್ಪಿಸುವ ಈ ವರ್ಷದ ಕನ್ನಡಿಗ 2026 ಅವಾರ್ಡ್ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾವಯವ ಪ್ರಗತಿಪರ ಸಾವಯವ ಕೃಷಿಕರಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಕಡಮ್ಮಾಜೆ ಫಾರ್ಮ್ಸ್ ನ ದಿ.ದಿನಕರ ಗೌಡ ದಂಪತಿಗಳ ಪುತ್ರ ಎಲ್. ಎಲ್.ಬಿ ಪದವೀಧರ ದೇವಿಪ್ರಸಾದ್ ಕೆ. ಗೌಡ ರವರಿಗೆ ಮಾರ್ಚ್ 03 ರಂದು ಬೆಂಗಳೂರು ನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇ ಗೌಡ ರವರು ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ನ್ಯೂಸ್ 18 ಕನ್ನಡ ಸಂಪಾದಕ ಹರಿಪ್ರಸಾದ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು , ಸಿನಿಮಾ ತಾರೆಯರು, ಸಾಧಕರು ಉಪಸ್ಥಿತರಿದ್ದರು.

ಅಡಿಕೆ, ತೆಂಗು, ಕಾಳು ಮೆಣಸು,ಹಣ್ಣು ಹಂಪಲು, ಮೀನುಗಾರಿಕೆ, ಕೋಳಿಸಾಕಣೆ,ಹೈನುಗಾರಿಕೆ, ಹಾಗೂ ವಿವಿಧ ರೀತಿಯ ಪ್ರಾಣಿ ಪಕ್ಷಿಗಳ ಸಾಕಣೆಯ ಜೊತೆಗೆ ಸುಸ್ಥಿರ ಮಾದರಿಯಲ್ಲಿ ಬೆಳೆಸುವ ಮಾದರಿ ಕೃಷಿಕರಾಗಿ ಸಮಗ್ರ ಕೃಷಿಯಲ್ಲಿ ಗುರುತಿಸಿಕೊಂಡಿದ್ದಾರೆ. ತಾಯಿ ಕುಸುಮ , ಪತ್ನಿ,ಮಕ್ಕಳು,ಸಹೋದರ ದಂಪತಿಗಳು, ಮಕ್ಕಳು, ಇವರೆಲ್ಲರೂ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ.
