Home » Bengaluru : ಬಿಜೆಪಿಯಲ್ಲಿ ನಟಿ ಅಮೂಲ್ಯ ಪತಿಗೆ ಮಹತ್ವದ ಹುದ್ದೆ!!

Bengaluru : ಬಿಜೆಪಿಯಲ್ಲಿ ನಟಿ ಅಮೂಲ್ಯ ಪತಿಗೆ ಮಹತ್ವದ ಹುದ್ದೆ!!

0 comments

Bengaluru : ಕನ್ನಡ ಚಲನಚಿತ್ರ ನಟಿ ಅಮೂಲ್ಯ ಅವರ ಪತಿ ಜಗದೀಶ್ ಆರ್ ಚಂದ್ರ ಅವರಿಗೆ ಮಹತ್ವದ ಹುದ್ದೆಯನ್ನು ನೀಡಲಾಗಿದೆ. ಈ ಕುರಿತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಎ.ಆರ್. ಸಪ್ತಗಿರಿ ಗೌಡ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಬಿಜೆಪಿ ವತಿಯಿಂದ ಬೆಂಗಳೂರು ಕೇಂದ್ರ ಜಿಲ್ಲೆಯ ವಿವಿಧ ಮೋರ್ಚಾಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಜಗದೀಶ್ ಆರ್. ಚಂದ್ರ ಅವರನ್ನು ಬೆಂಗಳೂರು ಕೇಂದ್ರ ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಕುರಿತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಎ.ಆರ್. ಸಪ್ತಗಿರಿ ಗೌಡ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಇದೀಗ ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕವಾಗಿದ್ದು, ರಾಜಕೀಯ ಪಯಣದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಬೆಂಗಳೂರು ಕೇಂದ್ರ ಜಿಲ್ಲೆಯ ಮೋರ್ಚಾ ಅಧ್ಯಕ್ಷರು

banner

ಯುವ ಮೋರ್ಚಾ – ಜಗದೀಶ್ ಆರ್. ಚಂದ್ರ

ಮಹಿಳಾ ಮೋರ್ಚಾ – ನೀತಾ ಎಂ.ಎನ್. ರೆಡ್ಡಿ

ಎಸ್.ಸಿ. ಮೋರ್ಚಾ – ಮುನಿಯಲ್ಲಪ್ಪ

ಹಿಂದುಳಿದ ವರ್ಗಗಳ ಮೋರ್ಚಾ – ಹೆಚ್.ಆರ್. ಕೃಷ್ಣಪ್ಪ

ಎಸ್.ಟಿ. ಮೋರ್ಚಾ – ಗಿರೀಶ್ ಕುಮಾರ್ ಬಿ.

ರೈತ ಮೋರ್ಚಾ – ರುದ್ರಪ್ಪ ವೈ.

ಈ ನೇಮಕಾತಿಗಳ ಮೂಲಕ ಪಕ್ಷ ಸಂಘ

You may also like