Home » ಚಿರತೆಯ ಮೇಲೆರಗಿದ ಮುಳ್ಳುಹಂದಿ, ಡೆಡ್ಲಿ ಅಟ್ಯಾಕ್‌ಗೆ ಚಿರತೆ ಸ್ಥಳದಲ್ಲೇ ಸಾವು

ಚಿರತೆಯ ಮೇಲೆರಗಿದ ಮುಳ್ಳುಹಂದಿ, ಡೆಡ್ಲಿ ಅಟ್ಯಾಕ್‌ಗೆ ಚಿರತೆ ಸ್ಥಳದಲ್ಲೇ ಸಾವು

0 comments

ಚಾಮರಾಜನಗರ: ಬಂಡೀಪುರ ಹುಲಿ ಸುರಕ್ಷಿತ ಪ್ರದೇಶದ ವ್ಯಾಪ್ತಿಯ ರಂಗನಬೆಟ್ಟದಲ್ಲಿ ಹಸಿವಿನಿಂದ ಇದ್ದ ಚಿರತೆಯೊಂದು ಮುಳ್ಳುಹಂದಿಯ ಮೇಲೆ ಅದರ ಮೇಲೇರಗಿದೆ. ಆದರೆ ತನ್ನ ರಕ್ಷಣೆಗಾಗಿ ಮುಳ್ಳುಹಂದಿ ʼರಿವರ್ಸ್‌ ಅಟ್ಯಾಕ್‌ʼ ಮಾಡಿದಾಗ, ಅದರ ಮೈಮೇಲಿದ್ದ ಉದ್ದನೆಯ ಮತ್ತು ಚೂಪಾದ ಮುಳ್ಳುಗಳು ಚಿರತೆಯ ಎದೆಯ ಭಾಗಕ್ಕೆ ಬಲವಾಗಿ ತಾಕಿದೆ.

ಫಾರೆಸ್ಟ್‌ ವಾಚರ್ಸ್‌ ಬೀಟ್‌ ಹೋಗಿದ್ದಾಗ ಚಿರತೆಯ ಶವ ದೊರಕಿದೆ. ಪಶುವೈದ್ಯರು ಸ್ಥಳದಲ್ಲೇ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಈ ವರದಿ ಬಹಿರಂಗ ಗೊಂಡಿದೆ. ಮುಳ್ಳು ಹಂದಿಯ ಮುಳ್ಳು ಚಿರತೆಯ ಎದೆಯ ಮೂಲಕ ನೇರವಾಗಿ ಹೃದಯಕ್ಕೆ ತಗುಲಿದೆ. ಇದರಿಂದ ಆಂತರಿಕ ರಕ್ತಸ್ರಾವ ಉಂಟಾಗಿ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

You may also like