ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಯಲ್ಲಿ ಜೂ. 12ರಂದು ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ ನಡೆಯಿತು.


ಶಾಲಾ ವಿದ್ಯಾರ್ಥಿಗಳು ಶಾಲಾ ನಾಯಕನಾಗಿ ಪ್ರತ್ಯುಶ್ ಹಾಗೂ ಶಾಲಾ ಉಪ ನಾಯಕಿಯಾಗಿ ಧನ್ವಿ ಭಂಡಾರಿ ಇವರನ್ನು ಆಯ್ಕೆ ಮಾಡಿರುತ್ತಾರೆ. ಇನ್ನುಳಿದಂತೆ ಶಿಕ್ಷಣ ಮಂತ್ರಿಯಾಗಿ ರಿತ್ವಿ ಕಾರಂತ್, ನೀರಾವರಿ ಮಂತ್ರಿ ರುಷ ಮೆಹಕ್, ಸಾಂಸ್ಕೃತಿಕ ಮಂತ್ರಿ ಗ್ರೀಷ್ಮ ಎಚ್ ಬಂಗೇರ, ಆರೋಗ್ಯ ಮಂತ್ರಿ ರಚನಾ, ಕ್ರೀಡಾ ಮಂತ್ರಿ ನಿಶಾ, ಶಿಸ್ತು ಮಂತ್ರಿಯಾಗಿ ರಿದ್ವಿಕ್.ಆರ್ ಜೈನ್ ಇವರನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿರುತ್ತಾರೆ.
ಆಯ್ಕೆಗೊಂಡ ವಿದ್ಯಾರ್ಥಿ ಪರಿಷತ್ತಿನ ನಾಯಕರನ್ನು ಹಾಗೂ ಪ್ರತಿ ಸ್ಪರ್ಧಿಗಳನ್ನು ಶಾಲಾ ಪ್ರಾಂಶುಪಾಲ ಮನಮೋಹನ್ ನಾಯ್ಕ ಕೆ.ಜಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದರು.
