Home » ಉಜಿರೆ: ಕಕ್ಕರೆಬೆಟ್ಟು ಮನೆ ಕೆಡವಿ ಸೊತ್ತು ನಾಶ ಪ್ರಕರಣ: ಆರೋಪಿ ವಿರುದ್ಧ ಕೇಸು ದಾಖಲು

ಉಜಿರೆ: ಕಕ್ಕರೆಬೆಟ್ಟು ಮನೆ ಕೆಡವಿ ಸೊತ್ತು ನಾಶ ಪ್ರಕರಣ: ಆರೋಪಿ ವಿರುದ್ಧ ಕೇಸು ದಾಖಲು

0 comments

Hindu neighbor gifts plot of land

Hindu neighbour gifts land to Muslim journalist

ಉಜಿರೆ: ಗ್ರಾಮದ ಕಕ್ಕರೆಬೆಟ್ಟು ನಿವಾಸಿ ರಾಜೀವಿ ಎನ್ನುವವರು ಉಜಿರೆ ಗ್ರಾಮದ ಕಕ್ಕರೆಬೆಟ್ಟು ಎನ್ನುವಲ್ಲಿ ಅವರ ಸ್ವಾಧೀನದಲ್ಲಿರುವ ಸರ್ವೆ ನಂ; 406/1 ರಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ಫೆ.27 ರಂದು 11 ಗಂಟೆಗೆ ರಾಜೀವಿ ಹಾಗೂ ಅವರ ಗಂಡ ಕೆಲಸಕ್ಕೆಂದು ಹೋದ ಸಮಯದಲ್ಲಿ ಆರೋಪಿ ರಫೀಕ್‌ ಎನ್ನುವಾತ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆ ಹಾಗೂ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್‌, ಗ್ಯಾಸ್‌ ಸಿಲಿಂಡರ್‌ ಪೀಠೋಪಕರಣಗಳನ್ನು, ಬಟ್ಟೆ ಬರೆ, ದಿನಸಿ ಸಾಮಾನುಗಳನ್ನು ಬಿಸಾಡಿದ್ದು, ಈ ಕೃತ್ಯದ ಕುರಿತು ವಿಡಿಯೋ ಮಾಡುತ್ತಿದ್ದ ಫಿರ್ಯಾದಿದಾರರ ಮಗಳಿಗೆ ನೀನು ಏನಾದರೂ ದೂರನ್ನು ನೀಡಿದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

ಈ ಕೃತ್ಯದಿಂದ ರಾಜೀವಿ ಅವರಿಗೆ ಸುಮಾರು ಹತ್ತು ಲಕ್ಷ ನಷ್ಟ ಉಂಟಾಗಿದೆ ಎಂದು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರನ್ನು ನೀಡಲಾಗಿತ್ತು.

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಯ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

You may also like