

ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಮಣ್ಣ ಸಂಕದ ಬಳಿ ಬಸ್, ಬೈಕ್, ಕಾರು, ನಡುವೆ ಭೀಕರ ರಸ್ತೆ ಅಪಘಾತವಾದ ಘಟನೆ ಫೆ.17 ರಂದು ನಡೆದಿತ್ತು.
ಘಟನೆಯಲ್ಲಿ ಕೊಲಂಗಾಜೆ ನಿವಾಸಿ ಕರಿಯಪ್ಪ ಗೌಡರಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ಫೆ.19ರಂದು ನಡೆದಿದೆ.