Home Death ಇತ್ತ ಕಡೆ ಗರ್ಭಿಣಿ ತಾಯಿಯ ಫೋಟೋ ಶೂಟ್‌, 3 ವರ್ಷದ ಮಗು ನೀರಿಗೆ ಬಿದ್ದು ಸಾವು

ಇತ್ತ ಕಡೆ ಗರ್ಭಿಣಿ ತಾಯಿಯ ಫೋಟೋ ಶೂಟ್‌, 3 ವರ್ಷದ ಮಗು ನೀರಿಗೆ ಬಿದ್ದು ಸಾವು

Getting Pregnant

Hindu neighbor gifts plot of land

Hindu neighbour gifts land to Muslim journalist

ನೆಲಮಂಗಲ/ಚಿಕ್ಕಮಗಳೂರು: ಎರಡನೇ ಮಗುವಿನ ಖುಷಿಯಲ್ಲಿದ್ದ ದಂಪತಿಯ ತಮ್ಮ ಮೊದಲ ಮಗು ನೀರಿಗೆ ಬಿದ್ದ ಘಟನೆ ನಡೆದಿದೆ. ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿ ಗಿಡ್ಡೆನಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ಲಕ್ಷ್ಮೀರ್‌ (3) ಮೃತ ಮಗು. ತಾಯಿ ಗರ್ಭಿಣಿ ಫೋಟೋ ಶೂಟ್‌ ಮಾಡುತ್ತಿದ್ದಾಗ, ಆಡವಾಡಿಕೊಂಡಿದ್ದ ಮಗು ಸ್ಥಳದಲ್ಲಿ ಸಣ್ಣ ನೀರಿನ ಪೂಲ್‌ಗೆ ಬಿದ್ದು ಮೃತಪಟ್ಟಿದೆ. ಮಗುವಿನ ವಚಾರದಲ್ಲಿನ ನಿರ್ಲಕ್ಷ್ಯವೇ ಈ ಘಟನೆ ಕಾರಣ ಎನ್ನಲಾಗಿದ್ದು, ಮೃತ ಮಗುವಿನ ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಲಕ್ಷ್ಮೀರ್‌ ಜ ಪಿ ನಗರ ನಿವಾಸಿಯಾಗಿರುವ ಸ್ವಾತಿ ಹಾಗೂ ಚರಣ್‌ ರಾಜ್‌ ದಂಪತಿಯ ಮಗುವಾಇಗದ್ದು, ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಚರಣ್‌ ರಾಜ್‌ ವಿದೇಶಕ್ಕೆ ತೆರಳಿದ್ದರು. ಫೋಟೋಶೂಟ್‌ ಮಾಡುವುದಾಗಿ ಗಂಡನ ಬಳಿ ಹೇಳಿ ಸ್ವಾತಿ ತಮ್ಮ ಸ್ನೇಹಿತೆ ಜೊತೆ ಬಂದಿದ್ದರು. ಈ ವೇಳೆ ಅವಘಡ ನಡೆದಿದೆ.

ಚರಣ್‌ರಾಜ್‌ ನಾಳೆ ಬೆಂಗಳೂರಿಗೆ ವಾಪಾಸು ಬರಲಿದ್ದು, ಮಗುವಿನ ಮರಣೋತ್ತರ ಪರೀಕ್ಷೆ ನಾಳೆ ನಡೆಸಲಿದೆ ಎನ್ನುವ ಕುರಿತು ವರದಿಯಾಗಿದೆ.