Home Entertainment ಬಿಗ್‌ಬಾಸ್‌ ರನ್ನರಪ್‌ ತುಳುನಾಡಿನ ಹೆಣ್ಣು ರಕ್ಷಿತಾ ಶೆಟ್ಟಿಯಿಂದ ಬೆಂಗಳೂರಿಗರಿಗೆ ಒಂದು ಪ್ರಶ್ನೆ! ಉತ್ತರ ನೀಡುವಿರಾ?

ಬಿಗ್‌ಬಾಸ್‌ ರನ್ನರಪ್‌ ತುಳುನಾಡಿನ ಹೆಣ್ಣು ರಕ್ಷಿತಾ ಶೆಟ್ಟಿಯಿಂದ ಬೆಂಗಳೂರಿಗರಿಗೆ ಒಂದು ಪ್ರಶ್ನೆ! ಉತ್ತರ ನೀಡುವಿರಾ?

Hindu neighbor gifts plot of land

Hindu neighbour gifts land to Muslim journalist

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ರಕ್ಷಿತಾ ಶೆಟ್ಟಿ ತಮ್ಮ ಬ್ರೋಕನ್‌ ಕನ್ನಡದಿಂದಲೇ ನೋಡುಗರನ್ನು ತಮ್ಮ ಕಡೆಗೆ ಸೆಳೆದ ವ್ಯಕ್ತಿ. ಇದೀಗ ಬಿಗ್‌ಬಾಸ್‌ ಮುಗಿದಿದ್ದು, ಬೆಂಗಳೂರಿನ ಜನತೆಗೆ ರಕ್ಷಿತಾ ಶೆಟ್ಟಿ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ವಿವಿಧ ಕಾರ್ಯಕ್ರಮಗಳಿಗೆ ರಕ್ಷಿತಾ ಭೇಟಿ ನೀಡುತ್ತಿದ್ದು, ಮಾಧ್ಯಮಗಳಿಗೂ ಸಂದರ್ಶನ ನೀಡುತ್ತಿದ್ದು, ವ್ಲಾಗ್‌ ಮಾಡುತ್ತಾ ಇದ್ದಾರೆ. ಇದರ ಜೊತೆಗೆ ತಮಗಿದ್ದ ತಪ್ಪು ಕಲ್ಪನೆಯ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಬೆಂಗಳೂರಿನಲ್ಲಿಯೂ ಸಮುದ್ರವಿದೆ ಎಂದು ತಿಳಿದುಕೊಂಡಿದ್ದೆ. ಬೆಂಗಳೂರಿನ ಯಾವುದಾದರೂ ಒಂದು ಭಾಗದಲ್ಲಿ ಸಮುದ್ರ ಇರಬಹುದು ಎಂದುಕೊಂಡಿದ್ದೆ. ಬಿಗ್‌ಬಾಸ್‌ಗೆ ಬಂದ ಮೇಲೆ ಸಮುದ್ರ ಇಲ್ಲ ಎನ್ನುವುದು ತಿಳಿಯಿತು.

ನನಗೆ ಬೇಸರವಾದ್ರೆ ನಾನು ಕಡಲ ಕಿನಾರೆಗೆ (ಬೀಚ್‌) ಹೋಗಿ ಕುಳಿತುಕೊಳ್ಳುತ್ತೇನೆ. ಉಡುಪಿ, ಮುಂಬೈನಲ್ಲಿ ಸಮುದ್ರ ಇದೆ ಅಲ್ಲವಾ? ಹಾಗೆಯೇ ಬೆಂಗಳೂರಿನಲ್ಲಿದೆ ಅಂತ ತಿಳಿದುಕೊಂಡಿದೆ. ಆದ್ರೆ ಇಲ್ಲಿ ಸಮುದ್ರವೇ ಇಲ್ಲ. ಹಾಗಾದ್ರೆ ಬೆಂಗಳೂರಿನ ಜನರು ಬೇಸರವಾದ್ರೆ ಎಲ್ಲಿಗೆ ಹೋಗ್ತಾರೆ ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವ್ಯಕ್ತಿ ನಾವು ಗೋವಾಗೆ ಹೋಗ್ತಿವಿ ಅಂದ್ರೆ ಗಿಲ್ಲಿ ನಟ, ಬಾರ್‌ಗೆ ಹೋಗ್ತಾರೆ ಎಂದು ತಮಾಷೆ ಮಾಡಿದ್ದಾರೆ.