

Kudligi: : ನಡುರಸ್ತೆಯಲ್ಲೇ ವಿದ್ಯಾರ್ಥಿಗಳ (Students) ಗುಂಪೊಂದು ಕುಡಿದು ನಡು ರಸ್ತೆಯಲ್ಲೇ, ಪಟಾಕಿ ಸಿಡಿಸಿ ಅಶಾಂತಿ ಉಂಟುಮಾಡಿದ ಘಟನೆ ಉಡುಪಿ (Udupi) ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿತ್ತು. ಇದೀಗ ಹುಚ್ಚಾಟವನ್ನು ಮೆರೆದಿದ್ದ ಕೇರಳ ಮೂಲದ ವಿದ್ಯಾರ್ಥಿಗಳ ಬಸ್ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಎಂಬಲ್ಲಿ ಫೆಬ್ರವರಿ 4 ರಂದು ಪಲ್ಟಿಯಾಗಿದೆ.
ಹಂಪಿಗೆ ತೆರಳುತ್ತಿದ್ದ ವೇಳೆ ಕೂಡ್ಲಿಗಿ ತಾಲೂಕಿನ ಅಮ್ಮನ ಕೇರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬ್ಬ ಪ್ರೊಫೆಸರ್ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿಯ 10 ವಿದ್ಯಾರ್ಥಿಗಳು ಹಾಗೂ 21 ವಿದ್ಯಾರ್ಥಿನಿಯರು ಹಂಪಿ, ದಾಂಡೇಲಿ, ಗೋಕರ್ಣ ಪ್ರವಾಸ ಕೈಗೊಂಡಿದ್ದರು. ಅವರೆಲ್ಲ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಗುರುವಾಯೂರಿನಿಂದ ರೈಲಿನಲ್ಲಿ ಹೊರಟು ಮಂಗಳೂರಿಗೆ ಬಂದಿದ್ದರು. ಅಲ್ಲಿಂದ ಸಂಜೆ 6ಕ್ಕೆ ಬಸ್ನಲ್ಲಿ ಹಂಪಿಯತ್ತ ಹೊರಟಿದ್ದರು.
ಬುಧವಾರ ಬೆಳಿಗ್ಗೆ 5 ಗಂಟೆ ವೇಳೆಗೆ ಚಾಲಕನ ನಿಯಂತ್ರಣದ ತಪ್ಪಿದ ಬಸ್ ಉರುಳಿ ಬಿತ್ತು. ಘಟನೆಯಲ್ಲಿ ಪ್ರೊಫೆಸರ್ ಲಕ್ಷ್ಮಿ ಅವರ ಕಾಲಿಗೆ ಬಲವಾಗಿ ಏಟು ಬಿದ್ದಿದ್ದು, ಅತುಲ್ಯ, ಅವನಿ, ಅತುಲ್, ಅಜಯ್ ರಾಜ್, ಅನುಗ್ರಹ ಅವರಿಗೆ ಸಹ ಗಂಭೀರ ಗಾಯವಾಗಿದೆ. ಅವರಿಗೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ಗೆ ಕರೆದೊಯ್ಯಲಾಯಿತು.
ಅಂದಹಾಗೆ ತ್ರಿಶೂರ್ ಜಿಲ್ಲೆಯ ಗುರುವಯೂರಿನ ಶ್ರೀ ಕೃಷ್ಣ ಕಾಲೇಜಿನಿಂದ ಉಡುಪಿ ಕಡೆ ಪ್ರವಾಸಕ್ಕಾಗಿ ವಿದ್ಯಾರ್ಥಿಗಳು ಎರಡು ಬಸ್ಗಳಲ್ಲಿ ಬಂದಿದ್ದು, ಟೋಲ್ ಗೇಟ್ ಬಳಿ ಬಸ್ಗಳನ್ನು ನಿಲ್ಲಿಸಿ ಮದ್ಯಸೇವನೆ ಮಾಡಿದಲ್ಲದೆ ಜೋರಾಗಿ ಹಾಡು ಹಾಕಿಕೊಂಡು ನಡು ರಸ್ತೆಯಲ್ಲೇ ಪಟಾಕಿ ಸಿಡಿಸಿ ಡಾನ್ಸ್ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು.













