

ಬೆಳ್ತಂಗಡಿ ಪಟ್ಟಣದ ಹೊರ ವಲಯದ ಕೆಲ್ಲಗುತ್ತು ಪರಿಸರದಲ್ಲಿ ಚಿರತೆ ಓಡಾಟ ಕಂಡು ಬಂದಿದೆ. ಇಂದ (ಫೆ.4) ಹಗಲಿನಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಇದನ್ನು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಚಿರತೆ ಓಡಾಟ ಮುಂದುವರಿದಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಆಟೋ ರಿಕ್ಷಾದಲ್ಲಿ ಮೈಕ್ ಅನೌನ್ಸ್ ಮೂಲಕ ಪಂಚಾಯತ್ ಸೂಚನೆ ನೀಡಿದೆ.













