Suicide: ಉದ್ಯೋಗ ಸಿಗಲಿಲ್ಲ ಎಂದು ಯುವಕ ಆತ್ಮ*ಹತ್ಯೆ!

Suicide: ಸಿವಿಲ್ ಇಂಜಿನಿಯರ್ ಆಗಿದ್ದ ಕಡಬ ತಾಲೂಕಿನ ಐತ್ತೂರು ಗ್ರಾಮದ ಕೇರ್ಪಡ ನಿವಾಸಿ ಸುಜಯ್ (28) ಎಂಬವರು ಉದ್ಯೋಗ ದೊರಕದ ಕಾರಣ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಡೆದಿದೆ.

ಯುವಕನ ತಂದೆ ಸುಂದರ ಗೌಡ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈತ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ಮತ್ತು ಹಾಸನದಲ್ಲಿ ಸುಮಾರು ಆರು ತಿಂಗಳು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿ ಬಳಿಕ ವರಮಾನ ಸಾಕಾಗುತ್ತಿಲ್ಲ ಎಂದು ಊರಿನಲ್ಲಿ ಬಂದು ನೆಲೆಸಿದ್ದರು.
Comments are closed.