Home News Madenooru Manu:ಮಡೆನೂರು ಮನು ರಿಲೀಸ್: ನನ್ನನ್ನು ಪ್ಲಾನ್ ಮಾಡಿ ಮುಗಿಸಿದ್ರು ಎಂದ ನಟ

Madenooru Manu:ಮಡೆನೂರು ಮನು ರಿಲೀಸ್: ನನ್ನನ್ನು ಪ್ಲಾನ್ ಮಾಡಿ ಮುಗಿಸಿದ್ರು ಎಂದ ನಟ

Hindu neighbor gifts plot of land

Hindu neighbour gifts land to Muslim journalist

Madenooru Manu: ಇತ್ತೀಚೆಗೆ ಅತ್ಯಾಚಾರ ಪ್ರಕರಣದ ಮೇಲೆ ಬಂಧನಕ್ಕೆ ಒಳಗಾಗಿದ್ದ ಹಾಸ್ಯ ಕಲಾವಿದ ಮಡೆನೂರು ಮನು ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ತಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ಆಡಿಯೋ ನನ್ನದಲ್ಲ. ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ ಎಂದು ಮಡೆನೂರು ಮನು ಹೇಳಿದ್ದು, ನಾನು ಮೊದಲು ದೊಡ್ಡವರು(ಶಿವಣ್ಣ) ಅವರನ್ನು ಭೇಟಿ ಮಾಡಿ ಸತ್ಯವನ್ನು ಅವರಿಗೆ ವಿವರಿಸಿ ಕ್ಷಮೆ ಕೇಳುತ್ತೇನೆ. ನನ್ನ ಮೂರು ವರ್ಷಗಳ ಶ್ರಮವನ್ನು ಹಾಳು ಮಾಡಿದ್ದಾರೆ ಎಂದಿದ್ದಾರೆ.

ಸಾಕಷ್ಟು ಅಡೆತಡೆಗಳ ನಡುವೆ ಸಿನಿಮಾ ರಿಲೀಸ್ ಆಗಿದ್ದು, ನನ್ನ ವಿರುದ್ಧ ಪ್ರತಿ ಹಂತದಲ್ಲಿಯು ಷಡ್ಯಂತ್ರ ನಡೆಸಿದ್ದಾರೆ. ಸಿನಿಮಾ ರಿಲೀಸ್​ಗೂ ಮೊದಲು ಕುಣಿಗಲ್ ಬಳಿ ಮೊಟ್ಟೆ ಹೊಡೆದರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು ಎಂದು ಮಡೆನೂರು ಮನು ಆರೋಪಿಸಿದ್ದಾರೆ. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದ್ದಾರೆ. ಅದಕ್ಕೂ ಮೊದಲು ರೇಪ್ ಕೇಸ್ ನಲ್ಲಿ ತಪ್ಪಿಸಿಕೊಂಡರು. 50 ಸಾವಿರ ಖರ್ಚು ಮಾಡಿ ಆಡಿಯೋ ರೆಡಿ ಮಾಡಿದ್ದು. ನಿನ್ನ ಕಥೆ ಮುಗಿಸುವುದಾಗಿ ಧಮ್ಕಿ ಹಾಕಿದ್ದರು ಎಂದು ಮಡೆನೂರು ಮನು ಇದೀಗ ಹೇಳಿದ್ದಾರೆ.