Udupi: ಬಾಯ್‌ಫ್ರೆಂಡ್‌ ಜೊತೆ ಸೇರಿ ಪತಿಗೆ ವಿಷವುಣಿಸಿ ಹತ್ಯೆ ಮಾಡಿದ ಪತ್ನಿ

Udupi: ಪ್ರಿಯತಮನ ಜೊತೆ ಸೇರಿ ತನ್ನ ಪತಿಯನ್ನೇ ಪತ್ನಿಯೋರ್ವಳು ಕೊಲೆ ಮಾಡಿದ ಘಟನೆಯೊಂದು ಉಡುಪಿಯ ಅಜೆಕಾರಿನಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

ತನ್ನ ಪತಿಗೇ ಸ್ಲೋ ಪಾಯ್ಸನ್‌ ನೀಡಿ ಸಾಯಿಸಿದ ಭೀಕರ ಘಟನೆ ನಡೆದಿದೆ.

ಕಾರ್ಕಳದ ಮರ್ಣೆ ನಿವಾಸಿ ಬಾಲಕೃಷ್ಣ ಎಂಬುವವರೇ ಮೃತರು. ಇವರ ಪತ್ನಿ ಪ್ರತಿಮಾ ಕೊಲೆ ಮಾಡಿರುವ ಆರೋಪಿ ಎನ್ನಲಾಗಿದೆ. ಪ್ರತಿಮಾ ಅವರ ಈ ಕೃತ್ಯಕ್ಕೆ ಪ್ರತಿಮಾ ಅವರ ಪ್ರಿಯಕರ ದಿಲೀಪ್‌ ಸಾಥ್‌ ನೀಡಿರುವ ಕುರಿತು ಮೃತ ಬಾಲಕೃಷ್ಣ ಅವರ ಕುಟುಂಬದವರು ಆರೋಪ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಬಾಲಕೃಷ್ಣನಿಗೆ ಪತ್ನಿ ಔಷಧಿ ಕೊಡುವ ನೆಪದಲ್ಲಿ ಸ್ಲೋ ಪಾಯ್ಸನ್‌ ನೀಡಿ ಕೊಂದಿದ್ದಾಳೆ ಎಂಬ ಆರೋಪವಿದೆ. ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಬಂದಿದ್ದು ಪರಿಶೀಲನೆ ಮಾಡಿ ಆರೋಪಿ ಪ್ರತಿಮಾಳನ್ನು ವಶಕ್ಕೆ ಪಡೆದಿರುವ ಕುರಿತು ವರದಿಯಾಗಿದೆ.

25 ದಿನಗಳಿಂದ ಜ್ವರದಿಂದ ವಾಂತಿ ಮಾಡಿ ನರಳುತ್ತಿದ್ದ ಗಂಡನಿಗೆ ಕಾಮಾಲೆ ರೋಗ ಇರಬಹುದು ಎಂದು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್‌, ವಿಕ್ಟೋರಿಯಾ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಬಾಲಕೃಷ್ಣ ಅವರು ಚಿಕಿತ್ಸೆಗೆ ಸ್ಪಂದಿಸದೆ ಅ.20 ರಂದು ಮೃತ ಹೊಂದಿದ್ದರು. ಆದರೆ ಮೃತರ ಸಹೋದರ ರಾಮಕೃಷ್ಣ ಅವರು ಬಾಲಕೃಷ್ಣ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಅಜೆಕಾರು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಪ್ರತಿಮಾ ಅವರ ಪ್ರಿಯಕರ ದಿಲೀಪ್‌ ಹೆಗ್ಡೆ ಕುರಿತು ಸಂಶಯ ವ್ಯಕ್ತಪಡಿಸಿ ದೂರು ದಾಖು ಮಾಡಲಾಗಿದೆ.

ನಾನು ಮತ್ತು ಪ್ರಿಯಕರ ಇಬ್ಬರೂ ಸೇರಿ ಊಟದಲ್ಲಿ ವಿಷ ಬೆರೆಸಿ ನೀಡಿರುವುದಾಗಿ ತನ್ನ ಸಹೋದರ ಸಂದೀಪ್‌ ಜೊತೆ ಪ್ರತಿಮಾ ಬಾಯಿ ಬಿಟ್ಟಿದ್ದಾಳೆ ಎಂದು ವರದಿಯಾಗಿದೆ. ಪೊಲೀಸರು ಮೃತರ ಪತ್ನಿ ಪ್ರತಿಮಾ, ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು ಬಂಧಿಸಿದ್ದು, ತನಿಖೆ ಮಾಡುತ್ತಿದ್ದಾರೆ.

Leave A Reply

Your email address will not be published.